ಕಾಪು ಪಡು ಬೀಚ್ ನಲ್ಲಿ ಮೃತದೇಹ ಪತ್ತೆ

Update: 2021-09-21 16:29 GMT

ಪಡುಬಿದ್ರಿ : ಹೆಜಮಾಡಿಯ ವ್ಯಕ್ತಿಯ ಶವ ಕಾಪು ಪಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿಂಭಾಗದ ಸಮುದ್ರ ಕಿನಾರೆಯಲ್ಲಿ ಸಂಜೆ ಪತ್ತೆಯಾಗಿದೆ.

ಹೆಜಮಾಡಿಯ ಬ್ರಪ್ಮಸ್ಧಾನ ರಸ್ತೆಯ ನಿವಾಸಿ ಸಂತೋಷ್ (40) ಮೃತರು ಎಂದು ಗುರುತಿಸಲಾಗಿದೆ.

ಸಮುದ್ರದಲ್ಲಿ ಶವವೊಂದು ತೇಲಿ ಬರುತ್ತಿರುವ ಬಗ್ಗೆ ಸ್ಥಳೀಯರಿಗೆ ದೊರಕಿದ ಮಾಹಿತಿಯ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿ ನಿತೇಶ್ ಕುಮಾರ್ ಶವವನ್ನು ಮೇಲಕ್ಕೆತ್ತಿದ್ದಾರೆ. ಬಳಿಕ ಸೂರಿ ಶೆಟ್ಟಿ ಅವರ ನೇತೃತ್ವದಲ್ಲಿ ಶವವನ್ನು ಉಡುಪಿ ಶವಾಗಾರಕ್ಕೆ ಸಾಗಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಕಾಪು ಪೊಲೀಸರು ಪರಿಶೀಲನೆ ನಡೆಸಿದರು.

ವಿವಾಹಿತರಾಗಿರುವ ಸಂತೋಷ್ ಹೆಜಮಾಡಿಯಲ್ಲಿ ಸೈಕಲ್ ಅಂಗಡಿಯನ್ನು ಹೊಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News