ಹವಾಮಾನ ವೈಪರೀತ್ಯ: ದುಬೈ, ದಮ್ಮಾಮ್‌ನಿಂದ ಮಂಗಳೂರಿಗೆ ಬಂದ ವಿಮಾನಗಳು ಕಲ್ಲಿಕೋಟೆಗೆ

Update: 2021-09-25 09:37 GMT
ಸಾಂದರ್ಭಿಕ ಚಿತ್ರ (Photo source: PTI)

ಮಂಗಳೂರು, ಸೆ.25: ದುಬೈ ಹಾಗೂ ದಮ್ಮಾಮ್‌ನಿಂದ ಹೊರಟು ಇಂದು ಮುಂಜಾನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗಿದ್ದ ವಿಮಾನಗಳೆರಡು ಹವಾಮಾನ ವೈಪರೀತ್ಯದಿಂದ ಕಲ್ಲಿಕೋಟೆಗೆ ತೆರಳಿದ ಘಟನೆ ನಡೆದಿದೆ.

ಬೆಳಗ್ಗೆ ಸುಮಾರು 5 ಗಂಟೆಯ ವೇಳೆಗೆ ಮಂಗಳೂರು ತಲುಪಬೇಕಿದ್ದ ವಿಮಾನಗಳು ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಅವುಗಳನ್ನು ಕಲ್ಲಿಕೋಟೆ ವಿಮಾನ ನಿಲ್ದಾಣಕ್ಕೆ ಡೈವರ್ಟ್ ಮಾಡಲಾಗಿತ್ತು. ಅದರಲ್ಲಿ ದುಬೈನಿಂದ ಆಗಮಿಸಿದ್ದ ವಿಮಾನ ಈಗಾಗಲೇ ಮಂಗಳೂರು ತಲುಪಿದೆ. ಇನ್ನೊಂದು ವಿಮಾನ 3 ಗಂಟೆಯ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ ಎಂದು ಇಂಡಿಯನ್ ಏರ್‌ಲೈನ್ಸ್‌ನ ಸ್ಟೇಷನ್ ಮ್ಯಾನೇಜರ್ ಪ್ರದೀಪ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News