ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಪದವಿ ಪ್ರದಾನ
ಮಂಗಳೂರು, ಸೆ.25: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ 2020-2021 ನೇ ಶೈಕ್ಷಣಿಕ ಸಾಲಿನ ಪದವಿ ಪ್ರದಾನ ಕಾರ್ಯಕ್ರಮವು ಶುಕ್ರವಾರ ನಡೆಯಿತು.
ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮೂಡಬಿದ್ರೆಯ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್ನ ಪ್ರಾಂಶುಪಾಲ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಕಡಮಿಕ್ ಸೆನೆಟ್ ಸದಸ್ಯ ಡಾ.ಜಿ.ಎಲ್. ಈಶ್ವರ ಪ್ರಸಾದ್ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಜೀವನಶೈಲಿಯಲ್ಲೂ ವಿವಿಧ ಬಗೆಯ ಬದಲಾವಣೆಗಳನ್ನು ಕಾಣಬಹುದಾಗಿದೆ. ವಿದ್ಯಾರ್ಥಿ ದೆಸೆಯಲ್ಲಿ ಯಾವುದು ಸರಿ ಮತ್ತು ತಪ್ಪುಎಂಬುದನ್ನು ನಿರ್ಧರಿಸಿ ಉತ್ತಮ ದಾರಿಯನ್ನು ಆರಿಸಿಕೊಂಡು ಜೀವನದಲ್ಲಿ ಮುನ್ನಡೆಯುವುದು ಮುಖ್ಯವಾಗುತ್ತದೆ ಎಂದು ಹೇಳಿದರು.
ಭಾರತವು ಇಂದು ಇಂಟರ್ನೆಟ್ ಕ್ಷೇತ್ರದಲ್ಲಿ 5ಜಿನಂತಹ ತಂತ್ರಜ್ಞಾನವನ್ನು ಪರಿಚಯಿಸಲು ಮುಂದಾಗಿದೆ. ಇಂತಹ ತಂತ್ರಜ್ಞಾನ ಕ್ರಾಂತಿಯು ದೇಶದ ಬೆಳವಣಿಗೆಗೆ ಪೂರಕವಾಗಿದೆ. ಪ್ರತಿದಿನವೂ ವಿವಿಧ ಕ್ಷೇತ್ರದಲ್ಲಿ ಕಲಿಕೆಯನ್ನು ಮುಂದುವರೆಸಲು ವಿಫುಲ ಅವಕಾಶಗಳಿವೆ. ಅವುಗಳನ್ನು ಸದ್ಬಳಕೆ ಮಾಡಬೇಕಿದೆ ಎಂದರು.
ನಿಟ್ಟೆ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಹಾಗೂ ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಕುಲಪತಿ ಎನ್. ವಿನಯ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವಿವಿಧ ಕೋರ್ಸ್ಗಳಲ್ಲಿ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ನೀಡಿ ಸನ್ಮಾನಿಸಲಾಯಿತು. ಬಿ.ಇ, ಎಂ.ಟೆಕ್ ಹಾಗೂ ಎಂ.ಸಿ.ಎ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಪದವಿ ಪ್ರದಾನ ಮಾಡಲಾಯಿತು.
ಬಿ.ಇ ವಿಭಾಗದಲ್ಲಿ ಬಯೋಟೆಕ್ನಾಲಜಿಯ ಶಿವಾನಿ, ಸಿವಿಲ್ ವಿಭಾಗದ ಸಿದ್ಧಿವಿನಾಯಕ ದತ್ತಾತ್ರೇಯ ಹೆಗ್ಡೆ, ಕಂಪ್ಯೂಟರ್ಸೈನ್ಸ್ನ ಮೈತ್ರಿ ಸುರೇಶ್,ಇಲೆಕ್ಟ್ರಾನಿಕ್ಸ್ ವಿಭಾಗದ ಸಂಜನಾ, ಇಲೆಕ್ಟ್ರಿಕಲ್ ವಿಭಾಗದ ಶ್ರೇಯಸ್ ಪಿ.ಪಿ, ಇನ್ಫೋಮೇಶನ್ಸೈನ್ಸ್ನ ಅರ್ಚನಾ ಎಸ್.ಎಚ್, ಮೆಕ್ಯಾನಿಕಲ್ ವಿಭಾಗದ ಕೆನನ್ ಡಿಸಿಲ್ವಾ, ಮತ್ತು ಎಂ.ಟೆಕ್ ವಿಭಾಗದಲ್ಲಿ ಲಕ್ಷ್ಮಿ ಎಂ, ಎಚ್.ಎಂ. ಮೇಘನಾ, ಶಾರದಾ ಜಿ, ಪ್ರಗತಿ ಯು ರಾವ್, ಲುಬ್ನಾ ಮೊಹಮ್ಮದ್, ಅಖಿಲ್ ಮೊಹಮ್ಮದ್, ಹರಿಪ್ರಸಾದ್, ಎಂಸಿಎ ವಿಭಾಗದ ಬಬಿತಾ ಶೆಟ್ಟಿ ಕೆ. ಚಿನ್ನದ ಪದಕ ಪಡೆದರು.
ಬಿ.ಇ ವಿಭಾಗದಲ್ಲಿ ಬಯೋಟೆಕ್ನಾಲಜಿಯ ಶ್ರೇಯಾ ಹೆಗ್ಡೆ, ಸಿವಿಲ್ ವಿಭಾಗದ ಸುಜಿತ್ ಶೆಟ್ಟಿ, ಕಂಪ್ಯೂಟರ್ಸೈನ್ಸ್ನ ಶಿವಾನಿ ಶೆಣೈ ಬಿ, ಇಲೆಕ್ಟ್ರಾನಿಕ್ಸ್ ವಿಭಾಗದ ನಿಶಾ ವಿರಾ ಡಿಕುನ್ನಾ, ಇಲೆಕ್ಟ್ರಿಕಲ್ ವಿಭಾಗದ ಪೃಥ್ವಿ ಜೆ. ಪಡ್ಪು, ಇನ್ಫೋಮೇಶನ್ಸೈನ್ಸ್ನ ಮೇಧಿನಿ ಐತಾಳ್, ಮೆಕ್ಯಾನಿಕಲ್ ವಿಭಾಗದ ಅಜಯ್ ಕೆ ಶೆಟ್ಟಿ, ಮತ್ತು ಎಂ.ಟೆಕ್ ವಿಭಾಗದ ಪ್ರಜ್ವಲ್ ಕೆ.ಎಸ್, ಮೊಹಮ್ಮದ್ ಹಾಶಿಮ್ ಎಂ.ಎಚ್, ದೀಕ್ಷಾ ವಿ ನಾಯ್ಕಿ, ವೈಷ್ಣವಿ ಎಸ್ ಶೆಟ್ಟಿ, ವಂದನಾ ಆರ್.ಪಿ, ಅಶ್ವಿನಿ ಯು, ನಿಖಿಲ್ ಕನೋಜಿ ಹಾಗೂ ಎಂ.ಸಿ.ಎ ವಿಭಾಗದ ವಿಘ್ನೇಶ್ ಪೈ ಬೆಳ್ಳಿ ಪದಕ ಪಡೆದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ವಾರ್ಷಿಕ ವರದಿ ವಾಚಿಸಿ ಸ್ವಾಗತಿಸಿದರು. ಉಪಪ್ರಾಂಶುಪಾಲ ಹಾಗೂ ಪರೀಕ್ಷಾ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ರಾವ್ ಬಿ.ಆರ್. ವೆುರವಣಿಗೆಯನ್ನು ಮುನ್ನಡೆಸಿದರು. ಉಪಪ್ರಾಂಶುಪಾಲ ಡಾ.ಐ ರಮೇಶ್ ಮಿತ್ತಂತಾಯ ಚಿನ್ನ ಹಾಗೂ ಬೆಳ್ಳಿಯ ಪದಕಗಳಿಸಿದ ವಿದ್ಯಾರ್ಥಿಗಳ ಹೆಸರುಗಳನ್ನು ವಾಚಿಸಿದರು.
ಡೆಪ್ಯೂಟಿ ಕಂಟ್ರೋಲರ್ ಆಫ್ ಇಕ್ಸಾಮಿನೇಶನ್ ಹಾಗೂ ಮೆಕ್ಯಾನಿಕಲ್ ವಿಭಾಗದ ಪ್ರೊ.ಡಾ.ಶ್ರೀನಿವಾಸ್ ಪೈ ವಂದಿಸಿದರು. ಸ್ಟೂಡೆಂಟ್ ವೆಲ್ಫೇರ್ ಡೀನ್ ಡಾ.ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ಸಂಯೋಜಿಸಿದರು. ಬಯೋಟೆಕ್ನಾಲಜಿ ವಿಭಾಗದ ಪ್ರಾಧ್ಯಾಪಕಿ ಡಾ. ಉಜ್ವಲ ಕಾರ್ಯಕ್ರಮ ನಿರೂಪಿಸಿದರು.