ಕಾಶ್ಮೀರ: ಭಯೋತ್ಪಾದಕರ ದಾಳಿಯಲ್ಲಿ ಹಿರಿಯ ಉದ್ಯಮಿ ಸಹಿತ ಮೂವರು ಮೃತ್ಯು

Update: 2021-10-05 17:33 GMT

ಶ್ರೀನಗರ: ಕಾಶ್ಮೀರದಲ್ಲಿ ಮಂಗಳವಾರ ಒಂದು ಗಂಟೆ ಅವಧಿಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಭಯೋತ್ಪಾದಕರು  ಮೂವರು ಪುರುಷರನ್ನು ಹತ್ಯೆಗೈದಿದ್ದಾರೆ. ಇದರಲ್ಲಿ ಒಬ್ಬರು ಹಿರಿಯ ಉದ್ಯಮಿಯಾಗಿದ್ದರೆ, ಇನ್ನಿಬ್ಬರು ಬೀದಿ ಆಹಾರ ಮಾರಾಟಗಾರ ಹಾಗೂ ಕ್ಯಾಬ್ ಚಾಲಕರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

70 ವರ್ಷದ ಮಖಾನ್ ಲಾಲ್ ಬಿಂದ್ರೂ, ಪ್ರಮುಖ ಉದ್ಯಮಿ ಹಾಗೂ  ಶ್ರೀನಗರದ ಇಕ್ಬಾಲ್ ಪಾರ್ಕ್‌ನಲ್ಲಿರುವ ಬಿಂದ್ರೂ ಮೆಡಿಕೇಟ್ ಫಾರ್ಮಸಿಯ ಮಾಲಕರಾಗಿದ್ದರು., ಅವರ ಔಷಧಾಲಯದ ಒಳಗೆ ಸಂಜೆ 7 ಗಂಟೆ ಸುಮಾರಿಗೆ ಗುಂಡು ಹಾರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ತಲುಪುವಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಪೊಲೀಸರು ಮತ್ತು ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದವು. ಆದರೆ ಅದಾಗಲೇ ದಾಳಿಕೋರರು ಪರಾರಿಯಾಗಿದ್ದರು. ಬಿಂದ್ರೂ ಅವರ ಔಷಧಾಲಯದ ಸುತ್ತಲಿನ ಪ್ರದೇಶವನ್ನು ಮುಚ್ಚಲಾಗಿದೆ ಹಾಗೂ  ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಶ್ಮೀರಿ ಪಂಡಿತರಾಗಿದ್ದ ಬಿಂದ್ರೂ ಕಾಶ್ಮೀರದಲ್ಲಿಯೇ ಇದ್ದರು ಹಾಗೂ  1990 ರಲ್ಲಿ ಭಯೋತ್ಪಾದನೆಯ ಉತ್ತುಂಗದಲ್ಲಿಯೂ ಸಹ ತಮ್ಮ ಔಷಧಾಲಯವನ್ನು ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News