ಆರ್ಯನ್‌ ಸೇರಿದಂತೆ ಡ್ರಗ್ಸ್‌ ಪ್ರಕರಣದ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

Update: 2021-10-07 13:47 GMT

ಮುಂಬೈ: ಬಾಲಿವುಡ್‌ ನಟ ಶಾರೂಖ್‌ ಖಾನ್‌ ಪುತ್ರ ಆರ್ಯನ್‌ ಖಾನ್, ಅರ್ಬಾಝ್‌ ಮರ್ಚೆಂಟ್‌ ಹಾಗೂ ರೂಪದರ್ಶಿ ಮುನ್ಮುನ್‌ ಧಮೇಚಾ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಇನ್ನಿತರ ಆರೋಪಿಗಳ ಎನ್‌ಸಿಬಿ ಕಸ್ಟಡಿ ವಿಸ್ತರಣೆಗೆ ಮುಂಬೈನ ನ್ಯಾಯಾಲಯವು ತಿರಸ್ಕರಿಸಿದೆ ಎಂದು livelaw ವರದಿ ಮಾಡಿದೆ. ಎನ್ಸಿಬಿ ಕಸ್ಟಡಿಯ ಬದಲು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

"ತನಿಖೆಗೆ ತನಿಖಾಧಿಕಾರಿಗೆ ಸಾಕಷ್ಟು ಸಮಯ ನೀಡಿದ್ದರಿಂದ ಯಾವುದೇ ಕಸ್ಟಡಿ ವಿಚಾರಣೆಯ ಅಗತ್ಯವಿಲ್ಲ" ಎಂದು ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್.ಎಂ.ನಿರ್ಲೇಕರ್ ಹೇಳಿದರು.

ತನಿಖೆಗಾಗಿ ಆರೋಪಿಗಳನ್ನು ಕಸ್ಟಡಿಗೆ ಪಡೆಯುವುದು ಅವರ ಹಕ್ಕು ಎಂಬುದರಲ್ಲಿ ಸಂದೇಹವಿಲ್ಲದಿದ್ದರೂ, ಆರೋಪಿಗಳನ್ನು ಎನ್‌ಸಿಬಿ ಕಸ್ಟಡಿಗೆ ಒಪ್ಪಿಸುವುದು ಸಂವಿಧಾನದಲ್ಲಿ ನೀಡಲಾಗಿರುವ ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ಗಮನಿಸಿದ್ದಾಗಿ ಅವರು ಹೇಳಿಕೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News