ಕೊನೆಯ ಎಸೆತದಲ್ಲಿ ಸಿಕ್ಸರ್‌ ಬಾರಿಸಿದ ಶ್ರೀಕರ್‌ ಭರತ್: ರೋಚಕ ಜಯ ಸಾಧಿಸಿದ ಆರ್‌ಸಿಬಿ

Update: 2021-10-08 18:16 GMT

ದುಬೈ: ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್‌-2021 ಪಂದ್ಯಾಟದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ರೋಚಕ ಜಯ ಸಾಧಿಸಿದೆ. ಕೊನೆಯ ಓವರ್‌ ನ ಕೊನೆಯ ಎಸೆತಕ್ಕೆ ಐದು ರನ್‌ ಗಳ ಅಗತ್ಯವಿದ್ದಾಗ ಸಿಕ್ಸರ್‌ ಬಾರಿಸಿದ ಶ್ರೀಕರ್‌ ಭರತ್‌ ಪಂದ್ಯದ ಪ್ರಮುಖ ಆಕರ್ಷಣೆಯಾಗಿ ಮೂಡಿ ಬಂದರು.

ಮೊದಲು ಬ್ಯಾಟಿಂಗ್‌ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಪೃಥ್ವಿ ಶಾ (48) ಶಿಖರ್‌ ಧವನ್‌ (43) ರನ್‌ ಗಳ ನೆರವಿನಿಂದ 164 ರನ್‌ ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ರಾಯಲ್‌ ಚಾಲೆಂಜರ್ಸ್‌ ತಂಡ ಆರಂಭಿಕ ಆಘಾತಕ್ಕೊಳಗಾದರೂ ಶ್ರೀಕರ್‌ ಭರತ್‌ (78) ಹಾಗೂ ಗ್ಲೆನ್‌ ಮ್ಯಾಕ್ಸ್‌ ವೆಲ್‌ (51) ರನ್‌ ಗಳ ನೆರವಿನಿಂದ ಗುರಿ ಮುಟ್ಟಿತು. ಆವೇಶ್‌ ಖಾನ್‌ ಎಸೆದ ಕೊನೆಯ ಎಸೆತದಲ್ಲಿ ಐದು ರನ್‌ ಗಳ ಅವಶ್ಯಕತೆಯಿದ್ದಾಗ ಚೆಂಡನ್ನು ಸಿಕ್ಸರ್‌ ಗಡಿ ದಾಟಿಸಿದ ಶ್ರೀಕರ್‌ ಭರತ್‌ ಕ್ರೀಡಾಂಗಣದಲ್ಲಿ ಮಿಂಚು ಹರಿಸಿದರು. 

ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಅಗ್ರಸ್ಥಾನದಲ್ಲಿದ್ದು, ರಾಯಲ್‌ ಚಾಲೆಂಜರ್ಸ್‌ ತಂಡವೂ ಪ್ಲೇ ಆಫ್‌ ಗೆ ಈಗಾಗಲೇ ಆಯ್ಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News