ರಾಜ್ಯ ಮಾಸಾಶನ ಮಂಜೂರಾತಿ ಸಮಿತಿಗೆ ಡಾ.ರವೀಶ್ ಪರವ ಪಡುಮಲೆ ಆಯ್ಕೆ

Update: 2021-10-12 08:05 GMT

ಪುತ್ತೂರ, ಅ.12: ರಾಜ್ಯ ಸರ್ಕಾರದಿಂದ 2019-20 ಮತ್ತು 2020-21ನೇ ಸಾಲಿನಲ್ಲಿ ಕಷ್ಟಕರ ಪರಿಸ್ಥಿತಿಯಲ್ಲಿರುವ ಸಾಹಿತಿ/ಕಲಾವಿದರಿಗೆ ಮಾಸಾಶನ ಮಂಜೂರಾತಿಗಾಗಿ ಆಯ್ಕೆ ಸಮಿತಿ ರಚಿಸಲಾಗಿದ್ದು, ನಾ.ಶ್ರೀನಿವಾಸ್ (ಪಾಪು) ಅಧ್ಯಕ್ಷರಾಗಿರುವ ಈ ರಾಜ್ಯ ಮಟ್ಟದ ಸಮಿತಿಗೆ ಡಾ.ರವೀಶ್ ಪರವ ಪಡುಮಲೆ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಪುತ್ತೂರು ತಾಲೂಕಿನ ಈಶ್ವರಮಂಗಲ ಪಡುಮಲೆ ನಿವಾಸಿಯಾಗಿರುವ ಡಾ.ರವೀಶ್ ಪರವ ತುಳುನಾಡಿನ ದೈವ ನರ್ತಕರಾಗಿದ್ದು, ಧರ್ಮಸ್ಥಳ ಮಂಜುನಾಥೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ವಿಭಾಗದ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News