ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸಿಧು-ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್ ಗುರುವಾರ ಭೇಟಿ

Update: 2021-10-12 12:46 GMT

ಹೊಸದಿಲ್ಲಿ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ಗುರುವಾರ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಯನ್ನು ಭೇಟಿ ಮಾಡಿ 'ಪಂಜಾಬ್ ಗೆ ಸಂಬಂಧಿಸಿದ ಸಂಘಟನಾತ್ಮಕ ವಿಷಯಗಳ' ಬಗ್ಗೆ ಚರ್ಚಿಸಲು ನಿರ್ಧರಿಸಿದ್ದಾರೆ ಎಂದು ಪಕ್ಷವು ಮಂಗಳವಾರ ತಿಳಿಸಿದೆ.

" ಪಂಜಾಬ್ ಕಾಂಗ್ರೆಸ್  ಅಧ್ಯಕ್ಷ ನವಜೋತ್ ಸಿಂಗ್ ಸಿಧು  ನನ್ನನ್ನು ಹಾಗೂ ವೇಣುಗೋಪಾಲ್ ಅವರನ್ನು ಭೇಟಿಯಾಗಲಿದ್ದು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಗೆ ಸಂಬಂಧಿಸಿದ ಕೆಲವು ಸಾಂಸ್ಥಿಕ ವಿಷಯಗಳ ಕುರಿತು ವೇಣುಗೋಪಾಲ್ ಅವರ ಕಚೇರಿಯಲ್ಲಿ ಅಕ್ಟೋಬರ್ 14 ರಂದು ಸಂಜೆ 6 ಗಂಟೆಗೆ ಚರ್ಚಿಸಲಿದ್ದಾರೆ " ಎಂದು ಪಂಜಾಬ್ ವ್ಯವಹಾರಗಳ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News