ಕನಕ ಕೀರ್ತನ ಗಂಗೋತ್ರಿ: 21 ಗಾಯಕರಿಗೆ ಪುರಸ್ಕಾರ

Update: 2021-10-12 17:38 GMT

ಮಂಗಳೂರು, ಅ.12: ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನ ಕೇಂದ್ರದಿಂದ ಇತ್ತೀಚೆಗೆ ನಡೆದ ‘ಕನಕ ಕೀರ್ತನ ಗಂಗೋತ್ರಿ’ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮದಲ್ಲಿ ಏಳು ವಿಭಾಗಗಳಲ್ಲಿ ಭಾಗವಹಿಸಿದ 92 ಅಭ್ಯರ್ಥಿಗಳಲ್ಲಿ 21 ಗಾಯಕರನ್ನು ಕನಕ ಕೀರ್ತನ ಗಂಗೋತ್ರಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಆಶಯದ ಈ ಕಾರ್ಯಕ್ರಮದಲ್ಲಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳು, ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಸಂಯೋಜಿತ ಹಾಗೂ ಸ್ವಾಯತ್ತ ಕಾಲೇಜುಗಳ ಪದವಿ ಮತ್ತು ಸ್ನಾತಕೋತ್ತರ ಪದವಿ ಹಾಗೂ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲಾ ವ್ಯಾಪ್ತಿಯ ರಾಜೀವ್‌ಗಾಂಧಿ ವೈದ್ಯಕೀಯ ಶಿಕ್ಷಣ, ವಿಶ್ವೇಶ್ವರಯ್ಯ ತಾಂತ್ರಿಕ ಶಿಕ್ಷಣ, ವಿಶ್ವವಿದ್ಯಾನಿಲಯ ಕಾಲೇಜುಗಳ ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿದ್ದರು.

ಪ್ರತಿ ವಿಭಾಗದಲ್ಲಿ ಮೂರು ಅತ್ಯುತ್ತಮ ಗಾಯಕರನ್ನು ಆಯ್ಕೆ ಮಾಡಲಾಗಿದ್ದು, ತಲಾ ಕನಕ ಪುರಸ್ಕಾರ ಸ್ಮರಣಿಕೆ, ಪ್ರಮಾಣಪತ್ರ ಮತ್ತು 2000 ರೂ. ನಗದನ್ನು ಡಿಸೆಂಬರ್‌ನಲ್ಲಿ ನಡೆಯುವ ‘ಕನಕ ಸ್ಮತಿ’ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ತಿಳಿಸಿದ್ದಾರೆ.

ಮೌಲ್ಯಮಾಪಕರಾಗಿ ಸಂಗೀತ ವಿದ್ವಾನ್ ನಾರಾಯಣ ಭಂಡಾರಿ, ಮುರಳೀಧರ ಕಾಮತ್, ಡಾ. ಬಾಲಕೃಷ್ಣ ಭಾರದ್ವಾಜ್, ಮಂಜುಳಾ ಜಿ. ರಾವ್ ಇರಾ, ಸುಮನ್ ಪಿ. ಮೂಡುಬಿದಿರೆ, ಶ್ರೀದೇವಿ ಕಲ್ಲಡ್ಕ ಭಾಗವಹಿಸಿದ್ದರು.

ಆಯ್ಕೆಯಾದ ಗಾಯಕರ ವಿವರ

ಪ್ರೌಢ ಶಾಲೆ ವಿಭಾಗ: ಕೊಣಾಜೆಯ ವಿಶ್ವಮಂಗಳ ಪ್ರೌಢಶಾಲೆ ವಿದ್ಯಾರ್ಥಿನಿ ಶ್ರೀರಕ್ಷಾ ಎಸ್.ಎಚ್. ಪೂಜಾರಿ, ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಸಮೀಪದ ಶ್ರೀರಾಮಕೃಷ್ಣ ಪ್ರೌಢಶಾಲೆಯ ಪ್ರತೀಕ್ಷ ಆರ್., ಸುರತ್ಕಲ್‌ನ ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಶಾಲೆಯ ಶ್ರೀಕರಿ.

ಪದವಿ ಪೂರ್ವ ವಿಭಾಗ: ಮಂಗಳೂರಿನ ಕೊಡಿಯಾಲ್ ಬೈಲ್ ಶಾರದಾ ಕಾಲೇಜಿನ ಅವನಿ ಎಸ್. ಭಟ್, ಮೂಡುಬಿದಿರೆ ಮಹಾವೀರ ಪ.ಪೂ. ಕಾಲೇಜಿನ ವೆಂಕಟೇಶ್ ಮಲ್ಯ, ರವಿಚಂದ್ರ.

ಪದವಿ ವಿಭಾಗ: ಮಂಗಳೂರು ಕೆನರಾ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿ ಆರ್. ಸುಧೀಕ್ಷ, ಪುತ್ತೂರು ಶ್ರೀವಿವೇಕಾನಂದ ಕಾಲೇಜಿನ ಬಿಸಿಎ ದ್ವಿತೀಯ ವರ್ಷದ ವಿಭಾಶ್ರೀ ಎಂ.ಎಸ್., ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಶರಣ್ಯ ಕೆ.ಎನ್.

ಸ್ನಾತಕೋತ್ತರ-ಸಂಶೋಧನ ವಿಭಾಗ: ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನ ಶಾಸ್ತ್ರ ವಿಭಾಗದ ಶ್ರೀವಾಣಿ ಕಾಕುಂಜೆ, ಮಂಗಳೂರು ವಿಶ್ವವಿದ್ಯಾನಿಲಯದ ಕಂಪ್ಯೂಟರ್ ವಿಭಾಗದ ಚೈತ್ರಾ ಕೊಪ್ಪಳ, ಪುತ್ತೂರು ಶ್ರೀವಿವೇಕಾನಂದ ಕಾಲೇಜಿನ ಎಂ.ಕಾಂ. ಪ್ರಥಮ ವರ್ಷದ ರೂಪಾ.

ಬೋಧಕ ವಿಭಾಗ: ಮಣಿಪಾಲದ ಎಂಐಟಿ ಸಹಾಯಕ ಪ್ರಾಧ್ಯಾಪಕ ಪೃಥ್ವಿ ಶೆಣೈ, ಸುಳ್ಯದ ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಅನಿತಾ ಎಸ್., ಮಂಗಳೂರಿನ ಡೊಂಗರಕೇರಿಯ ಕೆನರಾ ಪ್ರೌಢಶಾಲೆಯ ಶಿಕ್ಷಕಿ ರಚನಾ ಕಾಮತ್.

ಬೋಧಕೇತರ ವಿಭಾಗ: ಮಂಗಳೂರು ವಿಶ್ವವಿದ್ಯಾನಿಲಯದ ವಾಹನ ಚಾಲಕ ಯಶವಂತ, ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಬೇಬಿ, ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ರಮೇಶ್ ಯು.

ಸಾರ್ವಜನಿಕ ವಿಭಾಗ: ಬಿಜೈನ ಅಶ್ವನಿಕುಮಾರ್ ಎನ್.ಕೆ.ಆರ್., ಕಾರ್ಪೊರೇಷನ್ ಬ್ಯಾಂಕ್‌ನ ಮಂಗಳೂರು ವಾುನ ಪೈ, ಬಗಂಬಿಲ ಗಣೇಶ್ ಪೂಜಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News