ಉತ್ತರಪ್ರದೇಶ: ವಕೀಲರೋರ್ವರನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

Update: 2021-10-26 07:41 GMT

ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದಲ್ಲಿ ವಕೀಲರೊಬ್ಬರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಮೃತ ವಕೀಲರನ್ನು ಇಲಾಹಬಾಸ್ ಗ್ರಾಮದ ನಿವಾಸಿ ನಿಶಾಂತ್ ಎಂದು ಗುರುತಿಸಲಾಗಿದ್ದು, ಅವರಿಗೆ 30 ವರ್ಷ ವಯಸ್ಸಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಆರಂಭಿಕ ತನಿಖೆಯ ಸಮಯದಲ್ಲಿ ವಕೀಲರು  ಗನ್ ಶಾಟ್ ಗಾಯಗಳಿಂದ ಸಾವನ್ನಪ್ಪಿದರು" ಪೊಲೀಸ್ ಉಪ ಕಮಿಷನರ್ (ಸೆಂಟ್ರಲ್ ನೋಯ್ಡಾ), ಹರೀಶ್ ಚಂದರ್ ಹೇಳಿದರು.

ಪೊಲೀಸರು ಮೃತರ ಕುಟುಂಬವನ್ನು ಸಂಪರ್ಕಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಅವರು ಹೇಳಿದರು.

“ನಿಶಾಂತ್ ಕೆಲವು ಸಂಬಂಧಿಕರೊಂದಿಗೆ ಬಹಳ ಸಮಯದಿಂದ ಆಸ್ತಿ ಸಂಬಂಧಿತ ವಿವಾದವನ್ನು ಹೊಂದಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆತನ ಸಹೋದರಿಯೂ ತನ್ನ ಅತ್ತೆಯಂದಿರೊಂದಿಗೆ ಜಗಳವಾಡಿದ್ದಳು. ಈ ಎರಡು ಕೋನಗಳನ್ನು ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದೆ'' ಎಂದು ಡಿಸಿಪಿ ತಿಳಿಸಿದ್ದಾರೆ.

ಪ್ರಕರಣವನ್ನು ಭೇದಿಸಲು ಎಫ್‌ಐಆರ್ ದಾಖಲಿಸಲಾಗಿದ್ದು, ನಾಲ್ಕು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News