ತೋಡಿನ ನೀರಿನಲ್ಲಿ ಮುಳುಗಿ ಯುವಕ ಮೃತ್ಯು

Update: 2021-10-26 17:45 GMT

ಕಾರ್ಕಳ, ಅ.26: ತೋಡಿನಲ್ಲಿ ಈಜುತ್ತಿದ್ದ ಯುವಕರ್ನೋವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಂದಳಿಕೆ ಗ್ರಾಮದ ಆರ್ಯಾಡ್ ಮಾನಬೆಟ್ಟು ಎಂಬಲ್ಲಿ ಅ.26ರಂದು ಮಧ್ಯಾಹ್ನ 1.15ರ ಸುಮಾರಿಗೆ ನಡೆದಿದೆ.

ಮೃತರನ್ನು ಬಾಳೆಹೊನ್ನೂರಿನ ಜಾನಕಿ ಎಂಬವರ ಮಗ ಪ್ರವೀಣ್(19) ಎಂದು ಗುರುತಿಸಲಾಗಿದೆ. ಈತ ತನ್ನ ಚಿಕ್ಕಮ್ಮನ ಮನೆಗೆ ಬಂದಿದ್ದು, ಮನೆಯ ರೊಂದಿಗೆ ಕಲ್ಲಗುಂಡಿಯ ತೋಡಿಗೆ ಬಟ್ಟೆ ತೊಳೆಯಲು ಹೋಗಿದ್ದನು. ಅಲ್ಲಿ ಪ್ರವೀಣ್ ತೋಡಿನ ನೀರಿನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿ ವಾಗಿ ನೀರಿನ ಸುಳಿಗೆ ಸಿಕ್ಕಿ ಮುಳುಗಿ ಮೃತಪಟ್ಟಿದ್ದಾನೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News