ಸುಳ್ಯ : ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Update: 2021-11-06 17:09 GMT

ಸುಳ್ಯ : ಮೀನು ಹಿಡಿಯಲೆಂದು ಸ್ನೇಹಿತರ ಜೊತೆ ಹೋದ ಯುವಕನೋರ್ವ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳ್ಳಾರೆಯ ನೆಟ್ಟಾರು ಸಮೀಪದ ಮೊಗಪ್ಪೆ ಕೆರೆಯಲ್ಲಿ ಶನಿವಾರ ನಡೆದಿದೆ. 

ಸಂಪ್ಯದ ಮೂಲೆ ನಿವಾಸಿ ಸುಂದರ ಎಂಬವರ ಅವರ ಪುತ್ರ ಅವಿನಾಶ್ (23) ಮೃತ ಯುವಕ.

ಮೊಗಪ್ಪೆ ಕೆರೆಗೆ ಪುತ್ತೂರು ತಾಲೂಕಿನ ಮಠತ್ತಡ್ಕ ಸಂಪ್ಯಮೂಲೆ ಎಂಬಲ್ಲಿಯ ಸ್ನೇಹಿತರ ಜತೆ ಬಂದ ಅವಿನಾಶ್ ಮೀನು ಹಿಡಿಯಲು ಕೆರೆಗೆ ಇಳಿದಿದ್ದು, ನಂತರ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ದೂರಲಾಗಿದೆ.

ಪುತ್ತೂರು ಅಗ್ನಿಶಾಮಕ ದಳದೊಂದಿಗೆ ಸ್ಥಳೀಯರು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲಕ್ಕೆ ತೆಗೆದಿದ್ದಾರೆ.

ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News