ಕಾರ್ಕಳ ಪುರಸಭಾ ಸದಸ್ಯನಿಂದ ಎನಿಮಲ್ ಕೇರ್ ಟ್ರಸ್ಟ್ ಗೆ ಲಕ್ಷ ರೂ. ದೇಣಿಗೆ

Update: 2021-11-08 04:53 GMT

ಕಾರ್ಕಳ, ನ.8: ಕಾರ್ಕಳ ಪುರಸಭೆಯ ನಾಮನಿರ್ದೇಶನ ಸದಸ್ಯ ಅವಿನಾಶ್ ಜಿ. ಶೆಟ್ಟಿ ಕುಂಟಲ್ಪಾಡಿಯವರು ಅಹಿಂಸಾ ಎನಿಮಲ್ ಕೇರ್ ಟ್ರಸ್ಟ್ ಗೆ 1 ಲಕ್ಷ ರೂಪಾಯಿ ಧನಸಹಾಯ ನೀಡಿ ಆದರ್ಶ ಮೆರೆದಿದ್ದಾರೆ.

ಪ್ರತೀ ವರ್ಷ ದೀಪಾವಳಿ ಸಂದರ್ಭದಲ್ಲಿ ಅಂಬಾ ಭವಾನಿ ಕ್ರಾಕರ್ಸ್ ಎಂಬ ಚಿಲ್ಲರೆ ಪಟಾಕಿ ಅಂಗಡಿಯನ್ನು 3 ದಿನಗಳ ಕಾಲ ಅವಿನಾಶ್ ಜಿ. ಶೆಟ್ಟಿ ನಡೆಸುತ್ತಾರೆ. ಪಟಾಕಿ ಮಾರಾಟದಿಂದ ಬಂದ ಲಾಭಾಂಶದಲ್ಲಿ ಪ್ರತೀ ವರ್ಷ ಅಸಹಾಯಕರಿಗೆ ಆರ್ಥಿಕ ಸಹಾಯ ಮಾಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಅದರಂತೆ ಈ ಬಾರಿ ಅಹಿಂಸಾ ಎನಿಮಲ್ ಕೇರ್ ಟ್ರಸ್ಟ್ ಸಂಚಾಲಕ ವೀರು ಬಜಗೋಳಯವರಿಗೆ ಮೊತ್ತವನ್ನು ಹಸ್ತಾಂತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News