ವ್ಯವಹಾರದಲ್ಲಿ ನಷ್ಟ: ವ್ಯಾಪಾರಿ ಆತ್ಮಹತ್ಯೆ

Update: 2021-11-10 16:24 GMT

ಕೋಟ, ನ.10: ವ್ಯವಹಾರದಲ್ಲಿ ನಷ್ಟ ಅನುಭವಿಸಿದ ಪರಿಣಾಮ ಮೀನಿನ ವ್ಯಾಪಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನ.9ರಂದು ಸಂಜೆ ವೇಳೆ ನಡೆದಿದೆ.

ಮೃತರನ್ನು ಐರೋಡಿ ಗ್ರಾಮದ ದಂಡೆಬೆಟ್ಟು ನಿವಾಸಿ ಸುರೇಶ ಪುತ್ರನ್ (47) ಎಂದು ಗುರುತಿಸಲಾಗಿದೆ.

ಇವರು ಹಾಂಗಾರಕಟ್ಟೆ ಬಂದರಿನ ಹತ್ತಿರದಲ್ಲಿ ಮೀನಿನ ಅಂಗಡಿ ವ್ಯವಹಾರ ಮಾಡಿಕೊಂಡಿದ್ದು ವ್ಯವಹಾರಕ್ಕೆ ಸಂಬಂಧಿಸಿದಂತೆ ಸಾಲ ಮಾಡಿಕೊಂಡಿದ್ದರು. ಆದರೆ ಇವರು ವ್ಯವಹಾರದಲ್ಲಿ ನಷ್ಟ ಅನುಭವಿಸಿದ ಪರಿಣಾಮ ಸಾಲ ತೀರಿಸಲಾಗದ ಚಿಂತೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಮನೆ ಸಮೀಪದ ಸೀತಾನದಿ ದಂಡೆಯ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News