ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯ ನಗ-ನಗದು ಕಳವು

Update: 2021-11-21 16:31 GMT

ಶಂಕರನಾರಾಯಣ, ನ.21: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳವು ಮಾಡಿರುವ ಘಟನೆ ಹಾಲಾಡಿ ಮರ್ಲುಚಿಕ್ಕು ದೇವಸ್ಥಾನದ ಬಳಿ ನ.18ರ ಮಧ್ಯಾಹ್ನದಿಂದ ನ.21ರ ಮಧ್ಯಾವಧಿಯಲ್ಲಿ ನಡೆದಿದೆ.

ಶ್ರೀನಿವಾಸ ಶೆಟ್ಟಿ (71) ಎಂಬವರ ಮನೆಯ ಎದುರಿನ ಬಾಗಿಲು ಮುರಿದು ಒಳ ಪ್ರವೇಶಿಸಿದ ಕಳ್ಳರು, ಚೈನ್ ಸರ, ಕಿವಿಯೋಲೆ, ಉಂಗುರ, ಕರಿಮಣಿ ಬಳೆ, ಚಿನ್ನದ ಪ್ಲೇನ್ ಬಳೆ, ಕರಿಮಣಿ ಸರ, ನೆಕ್ಲೇಸ್ ಸೇರಿದಂತೆ ಒಟ್ಟು 4,50,000 ರೂ. ಮೌಲ್ಯದ 15 ಪವನ್ ತೂಕದ ಚಿನ್ನಾಭರಣ ಹಾಗೂ 50,000 ರೂ. ಹಣವನ್ನು ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News