ಯುವತಿ ಆತ್ಮಹತ್ಯೆ

Update: 2021-11-22 15:50 GMT

ಬೈಂದೂರು, ನ.22: ಮಾನಸಿಕ ಕಾಯಿಲೆಯಿಂದ ನರಳುತಿದ್ದ ಯುವತಿಯೊಬ್ಬರು ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಸಮೀಪದ ಗೇರುಮರದ ಕೊಂಬೆಗೆ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ಗೊಳಿಹೊಳೆ ಗ್ರಾಮ ಹಿಲ್ಲಾರ್ ಕೆಳಮನೆ ಎಂಬಲ್ಲಿ ನಡೆದಿದೆ.

ಮೃತರನ್ನು ಸುಜಾತ (31) ಎಂದು ಗುರುತಿಸಲಾಗಿದೆ.

ಇವರು ಮಾನಸಿಕ ಕಾಯಿಲೆಯಿಂದ ಬಳಲುತಿದ್ದು ಕುಂದಾಪುರದ ಶ್ರೀಮಾತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಇವರು ನಿನ್ನೆ ರಾತ್ರಿ 9:30ರಿಂದ ಇಂದು ಬೆಳಗ್ಗೆ 6:30ರ ನಡುವಿನ ಅವಧಿಯಲ್ಲಿ ಮನೆಯ ಸಮೀಪದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News