ನ.28ರಂದು ಜೋಕಟ್ಟೆಗೆ ಅಫ್ಝಲ್ ಖಾಸಿಮಿ ಕೊಲ್ಲಂ

Update: 2021-11-27 07:12 GMT

ಮಂಗಳೂರು, ನ.27: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜೋಕಟ್ಟೆ ಏರಿಯಾ ಸಮಿತಿಯ ವತಿಯಿಂದ ನ.28ರಂದು ಖ್ಯಾತ ವಾಗ್ಮಿ ಅಲ್-ಹಾಫಿಝ್ ಅಫ್ಝಲ್ ಖಾಸಿಮಿ ಕೊಲ್ಲಂ ಅವರ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ.

 ಜೋಕಟ್ಟೆಯ ಸಾಯಿರಿ ಕಾಂಪೌಂಡ್ ನಲ್ಲಿರುವ 'ಮರ್ಹೂಂ ಹುಸೈನ್ ಅಲ್ ಹಸಾ ವೇದಿಕೆ'ಯಲ್ಲಿ ರವಿವಾರ ಸಂಜೆ 7:30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ 'ಸರ್ವಾಧಿಕಾರದ ವಿರುದ್ಧ ಪ್ರವಾದಿ ಸಂದೇಶದ ಪ್ರಸಕ್ತತೆ' ಎಂಬ ವಿಷಯದಲ್ಲಿ ಅವರು ಪ್ರವಚನ ನೀಡಲಿದ್ದಾರೆ. ಮುಹಿಯುದ್ದೀನ್ ಹೊಸ ಜುಮಾ ಮಸೀದಿಯ ಖತೀಬ್ ಇ.ಎಂ.ಅಬ್ದುರ್ರಹ್ಮಾನ್ ದಾರಿಮಿ ಅಲ್ ಹಾಮಿದಿ ಕಾರ್ಯಕ್ರಮ ಉದ್ಘಾಟಿಸುವರು. ಪಾಪ್ಯುಲರ್ ಫ್ರಂಟ್ ಜೋಕಟ್ಟೆ ಏರಿಯಾದ ಅಧ್ಯಕ್ಷ ಇಮ್ತಿಯಾಝ್ ಅಧ್ಯಕ್ಷತೆ ವಹಿಸುವರು.

ಜೋಕಟ್ಟೆ ಈದ್ಗಾ ಮಸೀದಿಯ ಮಾಜಿ ಖತೀಬ್ ಪಿ.ಎಂ.ಅಬ್ದುಲ್ಲಾ ನಈಮಿ ದುಆಗೈಯುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News