​ನ.30ರಂದು ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

Update: 2021-11-27 16:00 GMT

ಉಡುಪಿ, ನ.27: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಹಾಗೂ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಉಡುಪಿ ಶಾಖೆ ಇವುಗಳ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನ.30ರಂದು ಬೆಳಗ್ಗೆ 9ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ಉಡುಪಿ ಪತ್ರಿಕಾ ಭವನದ ಬಳಿ ಇರುವ ಐಎಂಎ ಭವನದಲ್ಲಿ ಏರ್ಪಡಿಸಲಾಗಿದೆ.

ಶಿಬಿರದಲ್ಲಿ ಕೆಎಂಸಿಯ ಜನರಲ್ ಮೆಡಿಸಿನ್, ಕಾರ್ಡಿಯೋಲಜಿ (ಹೃದಯ), ಡರ್ಮಟೊಲಜಿ(ಚರ್ಮ), ನೇತ್ರ ವಿಭಾಗದ ಸ್ಕ್ರೀನಿಂಗ್ ಮತ್ತು ಸರ್ಜಿಕಲ್ ಟೀಮ್, ಇಎನ್‌ಟಿ(ಮೂಗು, ಕಿವಿ ಗಂಟಲು), ಆರ್ಥೋಪೆಡಿಕ್ಸ್ (ಮೂಳೆ) ಹಾಗೂ ನರ್ಸಿಂಗ್ ವಿಭಾಗಗಳು ಭಾಗವಹಿಸಲಿವೆ. ಅದೇ ರೀತಿ ರಕ್ತದೊತ್ತಡ, ಮಧುಮೇಹ ಹಾಗೂ ಇಸಿಜಿ ಪರೀಕ್ಷೆ ಕೂಡ ಮಾಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಹಾಗೂ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News