ನ.28ರಂದು ಉಚಿತ ಎಲುಬು ಸಾಂದ್ರತೆ ತಪಾಸಣಾ ಶಿಬಿರ

Update: 2021-11-27 16:18 GMT

ಉಡುಪಿ, ನ.27: ಧನ್ವಂತರಿ ಆಯುರ್ವೇದ ಆಸ್ಪತ್ರೆ ವತಿಯಿಂದ ಮೆಡಿಟೆಕ್ ಇಂಡಿಯಾ ಸಂಸ್ಥೆ ಸಹಯೋಗದೊಂದಿಗೆ ಉಚಿತ ಎಲುಬು ಸಾಂದ್ರತೆ ತಪಾಸಣೆ ಶಿಬಿರವು ನ.28ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಗುಂಡಿಬೈಲು ಮಣಿಪಾಲ ರಸ್ತೆಯಲ್ಲಿರುವ ಧನ್ವಂತರಿ ಆಯುರ್ವೇದ ಆಸ್ಪತ್ರೆಯಲ್ಲಿ ನಡೆಯಲಿದೆ.

ಶಿಬಿರದಲ್ಲಿ ಮೂಳೆ ಖನಿಜ ಸಾಂದ್ರತೆ (ಬಿಎಂಡಿ) ಪರೀಕ್ಷೆಯು ಮೂಳೆಯ ಪ್ರದೇಶದಲ್ಲಿ ಎಷ್ಟು ಕ್ಯಾಲ್ಸಿಯಂ ಮತುತಿ ಇತರೆ ರೀತಿಯ ಖನಿಜಗಳನ್ನು ಅಳೆಯುತ್ತಿದೆ. ಈ ಪರೀಕ್ಷೆಯು ಆರೋಗ್ಯ ರಕ್ಷಣೆ, ಆಸ್ಟಿಯೊಪೊರೋಸಿಸ್ ಪತ್ತೆ ಹಚ್ಚಲು ಮತ್ತು ಮೂಳೆ ಮುರಿತದ ಅಪಾಯವನ್ನು ಊಹಿಸಲು ಸಹಾಯ ಮಾಡುತತಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸತ್ಯಜಿತ್ ಕಡಕೋಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮೆಡಿಟೆಕ್ ಇಂಡಿಯಾ ಸಂಸ್ಥೆಯ ಮಾಲಕ ಪ್ರವೆದ್ ಹೆಗ್ಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News