ಮಂಗಳೂರು: ಕ್ರಿಸ್ತಾಗಮನದ ಪ್ರಥಮ ರವಿವಾರದ ಪೂಜೆ
Update: 2021-11-28 16:43 GMT
ಮಂಗಳೂರು, ನ.28: ನಗರದ ಪಾಲ್ದನೆಯಲ್ಲಿರುವ ಸಂತ ತೆರೆಜಾ ಚರ್ಚ್ನಲ್ಲಿ ಕ್ರಿಸ್ಮಸ್ ಪೂರ್ವಭಾವಿಯಾಗಿ ನಡೆಯುವ ಕ್ರಿಸ್ತಾಗಮನದ ಮೊದಲ ರವಿವಾರದ ಪೂಜೆಯನ್ನು ನಡೆಸಲಾಯಿತು.
ಚರ್ಚ್ನ ಐಸಿವೈಎಂ ಸದಸ್ಯರೊಂದಿಗೆ ನಡೆದ ಪೂಜೆಯಲ್ಲಿ ಸಾಂಕೇತಿಕವಾಗಿ ಮೇಣದ ಪತ್ತಿಯ್ನು ಚರ್ಚ್ನ ಧರ್ಮಗುರುಗಳಾದ ವಂ. ಆಲ್ಬನ್ ಡಿಸೋಜಾ ಉದ್ಘಾಟಿಸಿದರು. ಚರ್ಚ್ನ ಐಸಿವೈಎಂ ಘಟಕದ ಅಧ್ಯಕ್ಷ ಹ್ಯಾಸ್ಲಿನ್ ಡಿಸೋಜಾ, ಮೆಲ್ಯನ್ ನೊರೊನ್ನಾ, ಆ್ಯರನ್ ಲೋಬೋ, ಚರ್ಚ್ನ ಉಪಾಧ್ಯಕ, ವಿಲಿಯಂ ಲೋಬೋ, ಕಾರ್ಯದರ್ಶಿ ಆಸ್ಟಿನ್ ಮೊಂತೆರೋ ಉಪಸ್ಥಿತರಿದ್ದರು.