ಕ್ರೀಡಾ ಪಿಚ್ ರಚಿಸಿರುವ ಗ್ರೀನ್‌ಪಾರ್ಕ್ ಮೈದಾನದ ಸಿಬ್ಬಂದಿಗೆ 35,000 ರೂ.ಬಹುಮಾನ ಪ್ರಕಟಿಸಿದ ರಾಹುಲ್ ದ್ರಾವಿಡ್

Update: 2021-11-29 13:55 GMT

ಕಾನ್ಪುರ, ನ.29: ಐದು ದಿನಗಳ ಕಾಲ ಭಾರತ ಹಾಗೂ ನ್ಯೂಝಿಲ್ಯಾಂಡ್ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಪೋರ್ಟಿಂಗ್ ಪಿಚ್ ಸಿದ್ಧಪಡಿಸಿರುವ ಶಿವಕುಮಾರ್ ನೇತೃತ್ವದ ಕಾನ್ಪುರದ ಗ್ರೀನ್‌ಪಾರ್ಕ್ ಸ್ಟೇಡಿಯಂ ಮೈದಾನ ಸಿಬ್ಬಂದಿಗೆ ಭಾರತದ ಹೊಸ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವೈಯಕ್ತಿಕವಾಗಿ 35,000 ರೂ. ಬಹುಮಾನವನ್ನು ಪ್ರಕಟಿಸಿದ್ದಾರೆ.

ನಮ್ಮ ಮೈದಾನದ ಸಿಬ್ಬಂದಿಗೆ ರಾಹುಲ್ ದ್ರಾವಿಡ್ ಅವರು ವೈಯಕ್ತಿಕವಾಗಿ 35,000 ರೂ. ದೇಣಿಗೆ ನೀಡಿದ್ದಾರೆಂದು ಅಧಿಕೃತವಾಗಿ ಘೋಷಿಸಲು ನಾವು ಬಯಸುತ್ತೇವೆ ಎಂದು ಉತ್ತರಪ್ರದೇಶ ಕ್ರಿಕೆಟ್ ಅಸೋಸಿಯೇಶನ್(ಯುಪಿಸಿಎ)ಪಂದ್ಯದ ಬಳಿಕ ತಿಳಿಸಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News