ಅಕ್ರಮ ಮರಳುಗಾರಿಕೆಗೆ ದಾಳಿ: ದೋಣಿ ಜಪ್ತಿ

Update: 2021-11-30 17:24 GMT

ಪಡುಬಿದ್ರಿ: ಅಕ್ರಮ ಮರಳುಗಾರಿಕೆಗೆ ಮಂಗಳವಾರ ದಾಳಿ ನಡೆಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು 4 ದೋಣಿಗಳನ್ನು  ದಾಳಿ ನಡೆಸಿ ಜಪ್ತಿ ಮಾಡಿದ ಘಟನೆ ಪಲಿಮಾರು ಗ್ರಾಮದ ಅವರಾಲು ಮಟ್ಟು ಶಾಂಭವಿ ನದಿ ಪ್ರದೇಶದಲ್ಲಿ ನಡೆದಿದೆ. 

ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ಸಂದೀಪ್ ಹಾಗೂ ಭೂವಿಜ್ಞಾನಿ ಸಂಧ್ಯಾ ದಾಳಿ ಮಾಡಿ ದೋಣಿಗಳನ್ನು ವಶಕ್ಕೆ ಪಡೆದಿದ್ದಾರೆ.  4 ದೋಣಿಗಳನ್ನು ಕ್ರೇನ್ ಸಹಾಯದಿಂದ ಮೇಲಕ್ಕೆತ್ತಿ ಸಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕ ದೂರಿನ ಹಿನ್ನಲೆಯಲ್ಲಿ ಈ ಹಿಂದೊಮ್ಮೆ ಕಾರ್ಯಚರಣೆ ನಡೆಸಿ ಇದೇ ಪ್ರದೇಶದಲ್ಲಿ ಮರಳು ಜಪ್ತಿ ಮಾಡಲಾಗಿತ್ತು, ಇದೀಗ ಮತ್ತೆ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದ್ದು, ಈ ಹಿನ್ನಲೆಯಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News