ಡಿ.3ರಂದು ಕೃಷ್ಣಾಪುರದಲ್ಲಿ ಸೀರತ್ ಸಮಾವೇಶ

Update: 2021-12-02 10:17 GMT

ಮಂಗಳೂರು, ಡಿ.2: ಯುನಿವೆಫ್ ಕರ್ನಾಟಕ 'ಮಾನವೀಯ ಮೌಲ್ಯಗಳು, ಪರಧರ್ಮ ಸಹಿಷ್ಣುತೆ ಮತ್ತು ಪ್ರವಾದಿ ಮುಹಮ್ಮದ್ (ಸ)' ಎಂಬ ಕೇಂದ್ರೀಯ ವಿಷಯದಲ್ಲಿ ನವೆಂಬರ್ 5ರಿಂದ 2022ರ ಜನವರಿ 7ರವರೆಗೆ ಹಮ್ಮಿಕೊಂಡಿರುವ 'ಅರಿಯಿರಿ ಮನುಕುಲದ ಪ್ರವಾದಿಯನ್ನು' ಅಭಿಯಾನದ ಪ್ರಯುಕ್ತ ಡಿ.3ರ ಸಂಜೆ 6:45ಕ್ಕೆ ಕೃಷ್ಣಾಪುರದ ಪ್ಯಾರಡೈಸ್ ಗ್ರೌಂಡ್ ನಲ್ಲಿ ಸೀರತ್ ಸಮಾವೇಶ ಜರಗಲಿದೆ.

ಈ ಕಾರ್ಯಕ್ರಮದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ 'ವಿಶ್ವನಾಯಕ, ಮನುಕುಲ ವಿಮೋಚಕ ಪ್ರವಾದಿ'  ಎಂಬ ವಿಷಯದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ. 
ಮುಖ್ಯ ಅತಿಥಿಗಳಾಗಿ ಉದ್ಯಮಿ ಮುಹಮ್ಮದ್ ಅಶ್ರಫ್ ಮುಲ್ಕಿ ಮತ್ತು ಇಂಜಿನಿಯರ್ ಫಕ್ರುದ್ದೀನ್ ಸೂರಿಂಜೆ ಭಾಗವಹಿಸಲಿದ್ದಾರೆ‌ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News