ಮಂಗಳೂರು; ವಿವಿಧೆಡೆ ಅಭಿವೃದ್ಧಿ ಕಾಮಗಾರಿ : ಸಂಚಾರ ಮಾರ್ಗದಲ್ಲಿ ಮಾರ್ಪಾಡು
ಮಂಗಳೂರು, ಡಿ.2: ಮುಲ್ಕಿ ಸಮೀಪದ ಕಿಲ್ಪಾಡಿ ಜಂಕ್ಷನ್ನಿಂದ ಕುಕ್ಕಟ್ಟೆ ರಸ್ತೆಯವರೆಗೆ ಕಾಂಕ್ರಿಟೀಕರಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ, ಹಾಗಾಗಿ ಈ ರಸ್ತೆಯಲ್ಲಿ 2022ರ ಎಪ್ರಿಲ್ 30ರವರೆಗೆ ವಾಹನ ಸಂಚಾರವನ್ನು ನಿಷೇಧಿಸಿ ಪರ್ಯಾಯ ಸಂಪರ್ಕ ಕಲ್ಪಿಸಲಾಗಿದೆ.
ಕುಕ್ಕಟ್ಟೆ ಜಂಕ್ಷನ್ನಿಂದ ಕೊಲ್ಲೂರು ಪದವು ಕಡೆಗೆ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಮುಲ್ಕಿ ಕಡೆಯಿಂದ ಕುಕ್ಕಟ್ಟೆ ಜಂಕ್ಷನ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಪಂಜಿನಡ್ಕ, ಬಳ್ಕುಂಜೆ, ಉಳೆಪ್ಪಾಡಿ ಮಾರ್ಗ ವಾಗಿ ಅಥವಾ ಕವತ್ತಾರು ದೇವಸ್ಥಾನ ರಸ್ತೆಯ ಮುಖಾಂತರ ಬಳ್ಕುಂಜೆ, ಉಳೆಪ್ಪಾಡಿ ಮಾರ್ಗವಾಗಿ ಕುಕ್ಕಟ್ಟೆ ಕಡೆಗೆ ಸಂಚರಿಸ ಬೇಕು. ಕುಕ್ಕಟ್ಟೆ ಜಂಕ್ಷನ್ನಿಂದ ಮುಲ್ಕಿ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಉಳೆಪ್ಪಾಡಿ- ಬಳ್ಕುಂಜೆ-ಪಂಜಿನಡ್ಕ ಮಾರ್ಗವಾಗಿ ಮುಲ್ಕಿ ಕಡೆಗೆ ಸಂಚರಿಸಬೇಕು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬ್ರ 21 ಪದವು ಪಶ್ಚಿಮ ವಾರ್ಡಿನ ಶಕ್ತಿನಗರ, ಕುಂಟಲ್ಪಾಡಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಹಾಗಾಗಿ ಈ ರಸ್ತೆಯಲ್ಲಿ ಡಿ.30ರವರೆಗೆ ವಾಹನ ಸಂಚಾರವನ್ನು ನಿಷೇಧಿಸಿ ಪರ್ಯಾಯ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ.
ಯೆಯ್ಯಡಿ, ಮೇರಿಹಿಲ್ ಕಡೆಯಿಂದ ಕುಂಟಲ್ಪಾಡಿ ರಸ್ತೆಯ ಮೂಲಕ ಶಕ್ತಿನಗರ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ದಂಡಕೇರಿ (ಕುಂಟಲ್ಪಾಡಿ) ಸೇತುವೆ ಬಳಿ ಬಲಕ್ಕೆ ತಿರುಗಿ ಕೊಡಂಗೆ ರಸ್ತೆಯ ಮೂಲಕ ಶಕ್ತಿನಗರ, ಬಿಕರ್ನಕಟ್ಟೆ ಹಾಗೂ ನಂತೂರು ಕಡೆಗೆ ಸಂಚರಿಸಬೇಕು. ಶಕ್ತಿನಗರ ಕಡೆಯಿಂದ ಯೆಯ್ಯಿಡಿ, ಮೇರಿಹಿಲ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಕೊಡಂಗೆ ರಸ್ತೆ ಮೂಲಕ ಯೆಯ್ಯೆಡಿ, ಆದಿತ್ಯನಗರ ರಸ್ತೆಯ ಮೂಲಕ ಮೇರಿಹಿಲ್ ಕಡೆಗೆ ಸಂಚರಿಸಬೇಕು.
50ನೇ ಅಳಪೆ ದಕ್ಷಿಣ ವಾರ್ಡಿನ ಪಡೀಲ್ ರೈಲ್ವೆ ಬ್ರಿಡ್ಜ್ ನಿಂದ ಜಲ್ಲಿಗುಡ್ಡೆವರೆಗೆ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಕೈಗೊಳ್ಳಲಾಗು ತ್ತಿದೆ. ಹಾಗಾಗಿ ಈ ರಸ್ತೆಯಲ್ಲಿ ಡಿ30ರವರೆಗೆ ವಾಹನ ಸಂಚಾರವನ್ನು ನಿಷೇಧಿಸಿ ಪರ್ಯಾಯ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ.
ಪಡೀಲ್ ರೈಲ್ವೇ ಬ್ರಿಡ್ಜ್ ನಿಂದ ಜಲ್ಲಿಗುಡ್ಡೆ ವರೆಗೆ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಜಲ್ಲಿಗುಡ್ಡೆಯಿಂದ ಪಡೀಲ್-ಪಂಪ್ವೆಲ್ ಕಡೆಗೆ ಸಂಚರಿಸುವ ವಾಹನಗಳು ಕಲ್ಲಕಟ್ಟೆ-ಫೈಸಲ್ನಗರ-ವೀರನಗರ ಮೂಲಕ ಬಜಾಲ್ ರಸ್ತೆ (ಪಡೀಲ್) ಅಂಡರ್ ಪಾಸ್ಗೆ ಬಂದು ಅಲ್ಲಿಂದ ಮುಂದಕ್ಕೆ ಸಂಚರಿಸಬೇಕು.
ಜಲ್ಲಿಗುಡ್ಡೆಯಿಂದ ಪಂಪ್ವೆಲ್-ತೊಕ್ಕೊಟ್ಟು ಕಡೆಗೆ ಸಂಚರಿಸುವ ವಾಹನಗಳು ಜಲ್ಲಿಗುಡ್ಡೆ ಕ್ರಾಸ್-ಜೆ.ಎಂ. ರೋಡ್-ಎಕ್ಕೂರು ಮುಖಾಂತರ ಸಂಚರಿಸಬೇಕು. ಬಜಾಲ್ ಕಡೆಯಿಂದ ಪಂಪ್ವೆಲ್-ಪಡೀಲ್ ಕಡೆಗೆ ಸಂಚರಿಸುವ ವಾಹನಗಳು ಜಪ್ಪಿನಮೊಗರು ಮುಖಾಂತರ ರಾಷ್ಟ್ರೀಯ ಹೆದ್ದಾರಿಗೆ ಬಂದು ಸಂಚರಿಸಬೇಕು.
ಪಡೀಲ್ ಪಂಪ್ವೆಲ್ ಕಡೆಯಿಂದ ಜಲ್ಲಿಗುಡ್ಡೆ ಕಡೆಗೆ ಸಂಚರಿಸುವ ವಾಹನಗಳು ಬಜಾಲ್ ರಸ್ತೆ ರೈಲ್ವೆ (ಪಡೀಲ್) ಅಂಡರ್ ಪಾಸ್ ಮುಖಾಂತರ ವೀರನಗರ, ಫೈಸಲ್ ನಗರ, ಕಲ್ಲಕಟ್ಟೆ ಮಾರ್ಗವಾಗಿ ಜಲ್ಲಿಗುಡ್ಡೆ ಕಡೆಗೆ ಸಂಚರಿಸಬೇಕು. ಪಡೀಲ್ ಕಡೆಯಿಂದ ಜಲ್ಲಿಗುಡೆ, ಬಜಾಲ್ ಕಡೆಗೆ ಸಂಚರಿಸುವ ಲಘು ವಾಹನಗಳು ಬಜಾಲ್ ರಸ್ತೆ ರೈಲ್ವೆ (ಪಡೀಲ್) ಅಂಡರ್ ಪಾಸ್ ಮುಖಾಂತರ ವಿಜಯನಗರ, ಅಳಪೆ, ಬಬ್ಬುಸ್ವಾಮಿ ದೈವಸ್ಥಾನ, ಭಟ್ರಗೇಟ್ ಮುಖಾಂತರ ಸಂಚರಿಸಬೇಕು.
ರೂಟ್ ನಂಬ್ರ 11 ಬಿ, ಸಿ ಬಸ್ಗಳು ಪಂಪ್ವೆಲ್-ಎಕ್ಕೂರು-ಜೆ.ಎಂ. ರೋಡ್- ಜಲ್ಲಿಗುಡ್ಡೆ ಕ್ರಾಸ್ವರೆಗೆ ಹೋಗಿ ಅಲ್ಲಿಂದ ತಿರುಗಿ ವಾಪಸ್ ಅದೇ ರಸ್ತೆಯ ಮೂಲಕ ಸಂಚರಿಸಬೇಕು. 9 ನಂಬ್ರದ ಬಸ್ಗಳು ಎಕ್ಕೂರು-ಜೆ.ಎಂ. ರೋಡ್ ಮುಖಾಂತರ ಬಜಾಲ್ಗೆ ತೆರಳಿ ವಾಪಸ್ ಅದೇ ಮಾರ್ಗವಾಗಿ ಸಂಚರಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.