ಪತ್ರಕರ್ತ ವಾಗೀಶ್ ಕುಮಾರ್ ನಿಧನ

Update: 2021-12-07 08:42 GMT

ಮಂಗಳೂರು : ಪತ್ರಕರ್ತ ವಾಗೀಶ್ ಕುಮಾರ್ ಜಿಎ (46) ಇಂದು ಬೆಳಗ್ಗೆ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವಾಗೀಶ್ ಅವರು ಪತ್ನಿ, ಮಗಳು ಹಾಗೂ ಅಪಾರ ಸ್ನೇಹಿತರನ್ನು ಹೊಂದಿದ್ದರು.

ಈಟಿವಿ ಮೂಲಕ ಟೆಲಿವಿಷನ್ ನ್ಯೂಸ್ ಗೆ ಪದಾರ್ಪಣೆ ಮಾಡಿದ್ದರು ಅವರು, ಟಿವಿ9, ಕಸ್ತೂರಿ ನ್ಯೂಸ್, ಸಮಯ ಟಿವಿ, ವಿಜಯ ಕರ್ನಾಟಕ ಸೇರಿದಂತೆ ಹಲವಾರು ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ್ದರು. ಉದಯೋನ್ಮುಖ ಪತ್ರಕರ್ತರಿಗೆ ಮಾರ್ಗದರ್ಶನ ನೀಡುತ್ತಿದ್ದರು.

ವಾಗೀಶ್ ಕುಮಾರ್ ಅವರ ಅಂತಿಮ ವಿಧಿವಿಧಾನ ಅವರ ಸ್ವಂತ ಊರಾದ ಪಂಜಾ ಕುಕ್ಕೆಸುಬ್ರಹ್ಮಣ್ಯ ಹತ್ತಿರ ಮಾಡಲು ಕುಟುಂಬ ವರ್ಗದವರು ನಿರ್ಧರಿಸಿದ್ದಾರೆ.

ಈಟಿವಿಯ ಬಳಗದ ಸ್ನೇಹಿತರು ವಾಗೀಶ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಶಣೈ, ಪ್ರಧಾನ ಕಾರ್ಯದರ್ಶಿ ಕಿರಣ್ ಎಚ್ ವಿ ಹಾಗೂ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News