ಜಾನುವಾರು ಕಳವು ಪ್ರಕರಣ; ಮೂವರು ಆರೋಪಿಗಳ ಬಂಧನ
Update: 2021-12-07 11:20 GMT
ಭಟ್ಕಳ: ಜಾನುವಾರುಗಳನ್ನು ಕಳವು ಮಾಡಿ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಪಕ್ಕದ ಜಿಲ್ಲೆಯ ಇಬ್ಬರು ಹಾಗೂ ಭಟ್ಕಳದ ಓರ್ವನನ್ನು ಗ್ರಾಮೀಣ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಾರ್ಕಳ ಮೂಲದ ಅಬ್ದುಲ್ ಜಲೀಲ್, ಮುಲ್ಕಿಯ ಮುಸ್ತಫಾ ಹಾಗೂ ಭಟ್ಕಳ ಇಬ್ರಾಹಿಂ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಕಾರು ಹಾಗೂ 3 ಮೋಟಾರ್ ಬೈಕ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.