ಬೈಂದೂರು ಗ್ರಾಮದ ಕಟ್ಟಡ ಕಾರ್ಮಿಕರ ಸಮಾವೇಶ

Update: 2021-12-07 14:47 GMT

ಬೈಂದೂರು, ಡಿ.7: ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ(ಸಿಐಟಿಯು) ವತಿಯಿಂದ ಬೈಂದೂರು ಗ್ರಾಮದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಮಾವೇಶವು ರವಿವಾರ ಸಿಐಟಿಯು ಬೈಂದೂರು ಕಚೇರಿ ಸಭಾಂಗಣದಲ್ಲಿ ಜರಗಿತು.

ಸಮಾವೇಶವನ್ನು ಉದ್ಘಾಟಿಸಿದ ಸಿಐಟಿಯು ಮುಖಂಡ ಗಣೇಶ ತೊಂಡೆಮಕ್ಕಿ ಮಾತನಾಡಿ, ಕೇಂದ್ರ ಸರಕಾರ 1996 ಕಟ್ಟಡ ಕಾರ್ಮಿಕರ ಕಾನೂನು ಮತ್ತು ಸೆಸ್ ಕಾನೂನು ತಿದ್ದುಪಡಿ ತರುವ ಮೂಲಕ ಸಮಾಜಿಕ ಸುರಕ್ಷಾ ಕಲ್ಯಾಣ ಕಾಯಿದೆ ಜಾರಿಗೆ ತಂದಿದೆ. ಇದರಿಂದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿರುವ ಸಾವಿರಾರು ಕೋಟಿ ರೂಪಾಯಿ ಕಬಜಾ ಮಾಡಿಕೊಳ್ಳಲಿದೆ ಎಂಬುದು ಕಾರ್ಮಿಕರ ಆತಂಕವಾಗಿದೆ ಎಂದು ದೂರಿದರು.

ಬೈಂದೂರು ಗ್ರಾಮದ ಕಟ್ಟಡ ಕಾರ್ಮಿಕ ಸಂಘದ ನೂತನ ಅಧ್ಯಕ್ಷರಾಗಿ ವೆಂಕಟೇಶ್ ಕೋಣಿ, ಉಪಾಧ್ಯಕ್ಷರಾಗಿ ಭಾಸ್ಕರ್ ಆಚಾರ್ಯ, ಕಾರ್ಯದರ್ಶಿ ಯಾಗಿ ಮಣಿಕಂಠ, ಜೊತೆ ಕಾರ್ಯದರ್ಶಿಯಾಗಿ ಗಣೇಶ ಮೊಗವೀರ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಮಂಜು ಪಡುವರಿ ಅಧ್ಯಕ್ಷತೆ ವಹಿಸಿದ್ದರು. ಮಣಿಕಂಠ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News