ಅಪಘಾತ: ಗಾಯಾಳು ಬೈಕ್ ಸಹಸವಾರ ಮೃತ್ಯು
Update: 2021-12-07 16:36 GMT
ಕುಂದಾಪುರ, ಡಿ.7: ಕಾಳಾವರ ಗ್ರಾಮದ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಬಳಿ ಹಾಲು ಡೈರಿ ಹತ್ತಿರ ನಡೆದ ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸಹಸವಾರರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಮೃತರನ್ನು ಮಹಾಬಲ ಆಚಾರ್ಯ(62) ಎಂದು ಗುರುತಿಸಲಾಗಿದೆ. ಇವರು ನ.29ರಂದು ನಾಗೇಂದ್ರ ಆಚಾರ್ಯರ ಬೈಕಿನಲ್ಲಿ ಸಹಸವಾರರಾಗಿ ಕಾಳಾವರ ದೇವಸ್ಥಾನದ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದಾಗ ಎದುರಿನಿಂದ ಬಂದ ಬುಲೆಟ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಹಾಬಲ ಆಚಾರ್ಯ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಯಾಗದೆ ಡಿ.7ರಂದು ಬೆಳಗ್ಗೆ 11.30ರ ಸುಮಾರಿಗೆ ಮೃತಪಟ್ಟರು. ಈ ಅಪಘಾತದಲ್ಲಿ ಬೈಕ್ ಸವಾರ ನಾಗೇಂದ್ರ ಆಚಾರ್ಯ ಹಾಗೂ ಬುಲೆಟ್ ಸವಾರ ಚರಣ್ ರಾಜ್ ಗಾಯ ಗೊಂಡಿದ್ದರು. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.