ದ್ವಿಚಕ್ರ ವಾಹನ ಕಳವು
Update: 2021-12-07 16:43 GMT
ಮಂಗಳೂರು, ಡಿ.7: ನಗರದ ಬಲ್ಲಾಳ್ ನಗರದ ಪತ್ತುಮುಡಿಯ ಗುಂಡಿ ಹೌಸ್ ನಿವಾಸಿ ಕೆ.ಪ್ರಕಾಶ್ ಎಂಬವರು ತನ್ನ ಮನೆ ಸಮೀಪ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಾದ ಬಗ್ಗೆ ಬರ್ಕೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಕಾಶ್ ಅವರು ನ.22ರ ರಾತ್ರಿ 8ಕ್ಕೆ ದ್ವಿಚಕ್ರ ವಾಹನ ನಿಲ್ಲಿಸಿದ್ದರು. ನ.23ರ ಬೆಳಗ್ಗೆ 8 ಗಂಟೆಗೆ ಪಾರ್ಕ್ ಮಾಡಲಾದ ಸ್ಥಳಕ್ಕೆ ತೆರಳಿದಾಗ ದ್ವಿಚಕ್ರ ವಾಹನ ಕಳವಾಗಿರುವುದು ಬೆಳಕಿಗೆ ಬಂತು. ನಗರ ಸಹಿತ ಹಲವು ಕಡೆ ಹುಡುಕಾಡಿದರೂ ಸಿಗದ ಕಾರಣ ದೂರು ನೀಡಿದ್ದಾರೆ.