ವಾಮಂಜೂರು: ಸಾಲ ವಾಪಸ್ ಕೇಳಿದ್ದಕ್ಕೆ ಹಲ್ಲೆ
Update: 2021-12-07 16:46 GMT
ಮಂಗಳೂರು, ಡಿ.7: ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಕುಪಿತಗೊಂಡ ತಂಡವೊಂದು ಯುವಕ ಮತ್ತಾತನ ತಂದೆ ಮತ್ತು ಅಣ್ಣನಿಗೆ ಹಲ್ಲೆ ನಡೆಸಿದ ಘಟನೆ ಸೋಮವಾರ ರಾತ್ರಿ ವಾಮಂಜೂರು ಬಳಿ ನಡೆದಿದೆ.
ವಾಮಂಜೂರು ನಿವಾಸಿ ಮುಹಮ್ಮದ್ ಜಾಸ್ಮಿನ್ ಎಂಬವರು ತನ್ನ ತಂದೆ ಅಬುಸಾಲಿ, ಅಣ್ಣ ನೌಫಲ್ ಎಂಬವರ ಜೊತೆಗೂಡಿ ಹೊಟೇಲ್ ನಡೆಸುತ್ತಿದ್ದಾರೆ. ಸೋಮವಾರ ರಾತ್ರಿ 9:30ಕ್ಕೆ ಉಳಾಯಿಬೆಟ್ಟುವಿನ ಶರೀಫ್, ಪರಾರಿಯ ಉಬೈದುಲ್ಲಾ, ಗುಡ್ಡೆ ನಿವಾಸಿ ಫೈಝಲ್ ಎಂಬವರು ಸಾಲ ವಾಪಸ್ ಕೇಳುತ್ತೀಯಾ ಎಂದುಪ್ರಶ್ನಿಸಿ ಜಾಸ್ಮಿನ್ಗೆ ಹಲ್ಲೆ ನಡೆಸಿದ್ದಾರೆ. ತಡೆಯಲು ಬಂದ ಆತನ ತಂದೆ ಮತ್ತು ಅಣ್ಣನಿಗೆ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಜಾಸ್ಮಿನ್ ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.