ಡಿ.9ರಂದು ಬೀದಿಬದಿ ವ್ಯಾಪಾರಿಗಳಿಂದ ಪ್ರತಿಭಟನಾ ಪ್ರದರ್ಶನ

Update: 2021-12-07 17:03 GMT

ಉಡುಪಿ, ಡಿ.7: ಯಾವುದೇ ಮುನ್ಸೂಚನೆ ನೀಡದೆ ನಗರದಲ್ಲಿ ರಸ್ತೆ ಬದಿ ವ್ಯಾಪಾರ ಮಾಡುತ್ತಿರುವ ಬಡ ವ್ಯಾಪಾರಿಗಳನ್ನು ಏಕಾಏಕಿ ತೆರವುಗೊಳಿಸಿ ಬೀದಿ ಪಾಲು ಮಾಡಿ, ಅವರ ಕುಟುಂಬವನ್ನು ಉಪವಾಸ ಕೆಡವಲು ಕಾರಣರಾದ ಉಡುಪಿ ನಗರಸಭೆ ಅಧಿಕಾರಿಗಳ ವಿರುದ್ಧ ಉಡುಪಿ ಜಿಲ್ಲಾ ಬೀದಿ ಬದಿ ವ್ಯಾಪಾರಿಗಳ ಸಂಘ(ಸಿಐಟಿಯು)ದ ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನವನ್ನು ಡಿ.9ರಂದು ಹಮ್ಮಿಕೊಳ್ಳಲಾಗಿದೆ.

ಬೀದಿ ಬದಿ ವ್ಯಪಾರಿಗಳ ಸೊತ್ತುಗಳನ್ನು ಅಕ್ರಮ ವಾಗಿ ವಶಕ್ಕೆ ಪಡೆದುಕೊಂಡ ನಗರಸಭೆ ಅಧಿಕಾರಿಗಳು ಹಿಂದಿರುಗಿಸಬೇಕು ಹಾಗೂ ಬೀದಿ ಬದಿ ವ್ಯಾಪಾರಕ್ಕೆ ಬದಲಿ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿ ಬೆಳಗ್ಗೆ 9 ಗಂಟೆಗೆ ಉಡುಪಿಯ ಪಿ.ಪಿ.ಸಿ.ಕಾಲೇಜು ರಸ್ತೆಯ ಮೀನು ಮಾರುಕಟ್ಟೆ ಬಳಿಯ ಬೈಲೂರು ಕಾಂಪ್ಲೆಕ್ಸ್ ಮಹಡಿಯ ಸಭಾಂಗಣದಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News