ಬಿಜೆಪಿ ಒಡಕುಂಟು ಮಾಡುವ ಪಕ್ಷವೆಂದು ಪವಾರ್ 25 ವರ್ಷಗಳ ಹಿಂದೆಯೇ ಎಚ್ಚರಿಸಿದ್ದರು: ಸಂಜಯ್ ರಾವತ್

Update: 2021-12-11 18:35 GMT

ಮುಂಬೈ: ಬಿಜೆಪಿ ಒಡಕುಂಟು ಮಾಡುವ ಪಕ್ಷವೆಂದು 25 ವರ್ಷಗಳ ಹಿಂದೆಯೇ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ(ಎನ್ ಸಿಪಿ)ಮುಖ್ಯಸ್ಥ ಶರದ್ ಪವಾರ್ ಎಚ್ಚರಿಸಿದ್ದರು. ಆದರೆ ಶಿವಸೇನೆಗೆ ಎರಡು ವರ್ಷಗಳ ಹಿಂದೆಯಷ್ಟೇ ವಾಸ್ತವ ಅರ್ಥವಾಗಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಶನಿವಾರ ಹೇಳಿದ್ದಾರೆ.

ವಿವಿಧ ರಾಜಕೀಯ ರ್ಯಾಲಿಯಲ್ಲಿನ ಶರದ್ ಪವಾರ್ ಅವರ 61 ಆಯ್ದ ಭಾಷಣಗಳ ಸಂಗ್ರಹವಾಗಿರುವ ನೇಮ್ ಕಚಿ ಬೋಲ್ಣೆ (ಸರಿಯಾಗಿ ಮಾತನಾಡುವುದು)ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರಾವತ್ ಮಾತನಾಡಿದರು.

ಸುಮಾರು 25 ವರ್ಷಗಳ ಹಿಂದೆಯೇ ಬಿಜೆಪಿಗೆ ಈ ದೇಶದ ಏಕತೆ ಬೇಕಿಲ್ಲ. ಅದರ ವಿಧಾನ ಒಡಕುಂಟು ಮಾಡುವುದಾಗಿದೆ ಎಂದಿದ್ದರು. ಅಲ್ಲದೆ ಬಿಜೆಪಿಯ ನೀತಿಯು ಪ್ರಗತಿಗೆ ವಿರೋಧವಾಗಿದೆ. ಅದು ದೇಶವನ್ನು ಹಿಂದಕ್ಕೆ ಒಯ್ಯುತ್ತದೆ ಎಂದಿದ್ದರು. ಇದನ್ನು ಅರ್ಥಮಾಡಿಕೊಳ್ಳಲು ನಮಗೆ ಜಾಸ್ತಿ ಸಮಯ ಬೇಕಾಯಿತು ಎಂದರು.

ಈ ಪುಸ್ತಕವು ಇಂದು ಬಹಳ ಪ್ರಸ್ತುತವಾಗಿದೆ. ಪುಸ್ತಕವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ನೀಡುವೆ ಎಂದು ರಾಜ್ಯಸಭಾ ಸಂಸದ ರಾವತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News