ಗುರುಪುರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷರ ಪದಗ್ರಹಣ

Update: 2021-12-28 17:08 GMT

ಗುರುಪುರ, ಡಿ.28: ಗುರುಪುರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ನೂತನ ಅಧ್ಯಕ್ಷ ಅಬ್ದುಲ್ ಅಝೀಝ್ ಭಾಷಾ ಗುರುಪುರ ಕೈಕಂಬದ ಖಾಸಗಿ ಸಭಾಭವನದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ‘ಪದಗ್ರಹಣ’ ಮಾಡಿದರು. ಈ ಸಂದರ್ಭ ಘಟಕದ ಉಪಾಧ್ಯಕ್ಷರು, ಕಾಯದರ್ಶಿಗಳು, ಸಂಘಟನಾ ಕಾರ್ಯದರ್ಶಿಗಳು, ಮಾಧ್ಯಮ ವಕ್ತಾರರು, ಸಂಯೋಜಕರು ಅಧಿಕಾರ ಸ್ವೀಕರಿಸಿದರು.

ಪಕ್ಷದ ಧ್ವಜ ಹಸ್ತಾಂತರ ಮಾಡಿದ ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಪಕ್ಷಕ್ಕೆ ಅಲ್ಪಸಂಖ್ಯಾತರ ಬೆಂಬಲ ಮರೆಯುವಂತಿಲ್ಲ. ಒಗ್ಗಟ್ಟಿನ ಕೊರತೆಯಿಂದ ಈಗ ಪಕ್ಷ ಸ್ವಲ್ಪಹಿಂದೆ ಬಿದ್ದಿದೆ ಎಂದರು.

ದ.ಕ.ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಡಾ.ಮೊದಿನ್ ಬಾವಾ, ಐವನ್ ಡಿಸೋಜ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಪಕ್ಷದ ಮುಖಂಡರಾದ ಗಿರೀಶ್ ಆಳ್ವ, ಶಾಲೆಟ್ ಪಿಂಟೊ, ಯುಪಿ ಇಬ್ರಾಹಿಂ, ಆಲ್ವಿನ್ ಪ್ರಕಾಶ್, ಸುರಯ್ಯಿ, ಅನಿಲ್ ಕುಮಾರ್, ಪದ್ಮನಾಭ ಕೋಟ್ಯಾನ್, ಗಣೇಶ್ ಪೂಜಾರಿ ಗಂಜಿಮಠ, ಜಯಶೀಲ ಅಡ್ಯಂತಾಯ, ಟಿಎಂ ಇರ್ಫಾನ್, ಎಂ ಇಸ್ಮಾಯಿಲ್, ಅಬ್ದುಲ್ ಸಮದ್ ಅಡ್ಯಾರು, ಅಬ್ದುಲ್ ಲತೀಫ್ ಅಬ್ದುಲ್ಲ, ಮುಫೀದ್, ವೇಣುಗೋಪಾಲ, ಅಬ್ದುಲ್ ರಹ್ಮಾನ್ ವಳಚ್ಚಿಲ್‌ ಪದವು, ಅಬ್ದುಲ್ ಬಶೀರ್, ಕೀರ್ತಿರಾಜ್, ಸೆಲಿನಾ ಫೆರ್ನಾಂಡಿಸ್, ವಿನಯ್ ಕುಮಾರ್ ಶೆಟ್ಟಿ, ಕೃಷ್ಣ ಬಂಗೇರ ಆದ್ಯಪಾಡಿ, ಹರಿಯಪ್ಪ, ಅಕ್ಬರ್ ಭಾಷಾ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು. ಹುಸೇನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News