ವಿಟ್ಲ : ವೇಷ ಹಾಕಿದ ಆರೋಪದಲ್ಲಿ ಇಬ್ಬರ ಬಂಧನ

Update: 2022-01-11 03:55 GMT

ಬಂಟ್ವಾಳ, ಜ.11: ವಿಟ್ಲ ಠಾಣೆ ವ್ಯಾಪ್ತಿಯ ಸಾಲೆತ್ತೂರು ಎಂಬಲ್ಲಿ ಮುಖಕ್ಕೆ ಬಣ್ಣ ಬಲಿದು ವೇಷ ಹಾಹಿದ ಆರೋಪಕ್ಕೆ ಸಂಬಂಧಿಸಿ ಇಬ್ಬರನ್ನು ವಿಟ್ಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಂಗಲ್ಪಡಿ ನಿವಾಸಿ ಅಹ್ಮದ್ ಮುಜಿತಾಬ್ (28) ಮತ್ತು ಬಾಯಾರು ಪದವು ನಿವಾಸಿ ಮೊಯ್ದಿನ್ ಮುನಿಶ್ (19) ಬಂಧಿತ ಆರೋಪಿಗಳು.

ಇತ್ತೀಚಿಗೆ ನಡೆದ ಮದುವೆ ಸಮಾರಂಭದಲ್ಲಿ ಮದುಮಗ ವಧುವಿನ ಮನೆಗೆ ಅಂದು ರಾತ್ರಿ ಮುಖಕ್ಕೆ ಕಪ್ಪು ಬಣ್ಷ ಬಲಿದು ವೇಷ ಹಾಕಿ ಬಂದಿದ್ದು, ಇದು ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ವ್ಯಕ್ತಿಯೊಬ್ಬ ಪೊಲೀಸರಿಗೆ ನೀಡಿದ ದೂರಿನಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News