ಜಾನುವಾರು ಕಳವು: ದೂರು

Update: 2022-01-11 16:09 GMT

ಕಾರ್ಕಳ, ಜ.11: ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಐದು ಜಾನುವಾರು ಗಳನ್ನು ಕಳವು ಮಾಡಿರುವ ಘಟನೆ ಜ.10ರಂದು ರಾತ್ರಿ ವೇಳೆ ನಿಟ್ಟೆ ಲೆಮಿನಾ ಕ್ರಾಸ್ ಬಳಿ ನಡೆದಿದೆ.

ರಾಜೇಶ್ ಆಚಾರ್ಯ ಎಂಬವರ ಮನೆಯ ಪಕ್ಕದಲ್ಲಿ ಚಪ್ಪರದಲ್ಲಿ ಕಟ್ಟಿದ್ದ ದನಗಳ ಪೈಕಿ 3 ಕಪ್ಪುಬಣ್ಣದ ದನಗಳನ್ನು ಹಾಗೂ 2 ಕಪ್ಪು ಬಣ್ಣದ ಹೆಣ್ಣು ಕರುಗಳನ್ನು ಕಳ್ಳರು ವಾಹನದಲ್ಲಿ ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಜಾನುವಾರುಗಳ ಮೌಲ್ಯ 20,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News