ಗಾಂಜಾ ಸೇವನೆ: ಇಬ್ಬರು ವಿದ್ಯಾರ್ಥಿಗಳು ವಶಕ್ಕೆ

Update: 2022-01-12 16:08 GMT

ಪಡುಬಿದ್ರಿ, ಜ.12: ನಡ್ಸಾಲು ಗ್ರಾಮದ ಬೀಡು ಎಂಬಲ್ಲಿ ಜ.7ರಂದು ಮಾದಕ ವಸ್ತು ಸೇವನೆಗೆ ಸಂಬಂಧಿಸಿ ಇಬ್ಬರು ವಿದ್ಯಾರ್ಥಿಗಳನ್ನು ಪಡುಬಿದ್ರಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಯುವತಿ ಹಾಗೂ ಇಬ್ಬರು ಯುವಕರು ಮಾದಕ ವಸ್ತು ಸೇವಿಸಿ, ಗಾಯ ಗೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದು, ಈ ಮೂವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದಲ್ಲಿ ಪರೀಕ್ಷೆಗೆ ಒಳಪಡಿಸಲಾಯಿತು. ಅಲ್ಲಿಂದ ಬಂದ ವರದಿಯಂತೆ ಈ ಮೂವರ ಪೈಕಿ ಹೈದರಬಾದಿನ ಹರ್ಷಿತ್ ಸಿಂಗ್ ರಾವತ್(20), ಅಜಯ್ ಜೋಶ್ವ(20) ಎಂಬವರು ಗಾಂಜಾ ಸೇವಿಸಿ ರುವುದು ದೃಢಪಟ್ಟಿತು. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News