​ಸಾಕು ಪ್ರಾಣಿಗಳಿಗೆ ವಿಷ: ಪ್ರಕರಣ ದಾಖಲು

Update: 2022-01-12 16:21 GMT

ಮಂಗಳೂರು, ಜ.12: ನಾಯಿ, ಬೆಕ್ಕುಗಳನ್ನು ವಿಷ ಹಾಕಿ ಕೊಲ್ಲುತ್ತಿದ್ದಾನೆ ಎಂದು ಆರೋಪಕ್ಕೆ ಸಂಬಂಧಿಸಿದಂತೆ ನಗರದ ವಲೆನ್ಸಿಯಾ ನಿವಾಸಿ ಮನೋಹರ ಪಾಯಸ್ ಎಂಬಾತನ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಮಾರು 3-4 ವರ್ಷಗಳಿಂದ ಆರೋಪಿಯು ನಾಯಿ, ಬೆಕ್ಕುಗಳನ್ನು ವಿಷ ಹಾಕಿ ಕೊಲ್ಲುತ್ತಿದ್ದಾನೆ. ಈತನಿಂದ ಪರಿಸರದ ಮನೆಯವರು ರಕ್ಷಣೆ ಪಡೆಯುವುದಕ್ಕೆ ವಿಫಲಾಗಿದ್ದಾರೆ. ಒಂದು ವಾರದ ಹಿಂದೆ ನಾಯಿ, ಬೆಕ್ಕುಗಳನ್ನು ವಿಷವಿಟ್ಟು ಕೊಂದಿದ್ದು, ಬುಧವಾರ ಮೆಲ್ವಿಲ್ ಪಿಂಟೋ ಎಂಬವರ ನಾಯಿ ಕೂಡಾ ವಿಷಕಾರಿ ಸತ್ತು ಹೋಗಿತ್ತು.
ಅದರಂತೆ ಆರೋಪಿ ಮನೋಹರ ಪಾಯಸ್ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮೆಲ್ವಿಲ್ ಪಿಂಟೋ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News