ಘೋಷಣೆಗಳ ಬರಹ: ದ.ಕ.ಜಿಲ್ಲೆಯ ಮೂರು ಗ್ರಾಪಂಗಳು ಆಯ್ಕೆ

Update: 2022-01-14 17:53 GMT

ಮಂಗಳೂರು: ಗ್ರಾಮೀಣ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಒಡಿಎಫ್ ಪ್ಲಸ್ ಕುರಿತ ಘೋಷಣೆಗಳ ಬರಹಗಳಲ್ಲಿ ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಒಳಮೊಗರು ಗ್ರಾಪಂ ಪ್ರಥಮ ಮತ್ತು ಮಂಗಳೂರು ತಾಲೂಕಿನ ಕುಪ್ಪೆಪದವು ಗ್ರಾಪಂ ದ್ವಿತೀಯ ಹಾಗೂ ಉಳಾಯಿಬೆಟ್ಟು ಗ್ರಾಪಂ ತೃತೀಯ ಸ್ಥಾನ ಪಡೆದಿದೆ.

ಒಡಿಎಫ್ ಪ್ಲಸ್‌ನ ವಿವಿಧ ಘಟಕಗಳ ಬಗ್ಗೆ ಸಾಮೂಹಿಕ ಸುಧಾರಣೆ ತರಲು ಕೇಂದ್ರ ಸರಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಜಲಶಕ್ತಿ ಮಂತ್ರ್ರಾಲಯ 2021ರ ಅ.15ರವರೆಗೆ ಗ್ರಾಮೀಣ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಗ್ರಾಪಂ ಕಚೇರಿ, ಶಾಲೆ, ಸಮುದಾಯ ಸಂಕೀರ್ಣಗಳು, ಮಾರುಕಟ್ಟೆ, ಸಂತೆ ನಡೆಯುವ ಸ್ಥಳ, ಬಸ್ ನಿಲ್ದಾಣಗಳಲ್ಲಿ ಘೋಷಣೆ ಬರಹಗಳನ್ನು ಬರೆಸಲು ಸೂಚಿಸಲಾಗಿತ್ತು.

ಅದರಂತೆ ಈ ಆಂದೋಲನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಜಿಲ್ಲೆಯ ಮೂರು ಗ್ರಾಪಂಗಳು ಆಯ್ಕೆಯಾಗಿದ್ದು, ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಈ ಗ್ರಾಪಂ ಮುಖ್ಯಸ್ಥರನ್ನು ಗೌರವಿಸಲಾಗುವುದು ಎಂದು ಜಿಪಂ ಸಿಇಒ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News