ಮಂಗಳೂರು; ನೇತ್ರಾವತಿ ಸೇತುವೆಯಲ್ಲಿ ರಸ್ತೆ ಅಪಘಾತ: ಗಾಯಾಳು ಬೈಕ್ ಸವಾರ ಮೃತ್ಯು

Update: 2022-01-20 07:58 GMT
ಸಚಿನ್

ಮಂಗಳೂರು : ನಗರ ಹೊರವಲಯದ ಜಪ್ಪಿನಮೊಗರು ಸಮೀಪದ ನೇತ್ರಾವತಿ ಸೇತುವೆಯಲ್ಲಿ ಬುಧವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಮೃತಪಟ್ಟಿದ್ದಾರೆ.

ಉರ್ವ ಸಮೀಪದ ಸಚಿನ್ (32) ಮೃತಪಟ್ಟ ಬೈಕ್ ಸವಾರ. ಬುಧವಾರ ರಾತ್ರಿ ಸುಮಾರು 11:45ಕ್ಕೆ ಬೈಕ್ ಸ್ಕಿಡ್ ಆದ ಪರಿಣಾಮ ಇಲೆಕ್ಟ್ರಿಕಲ್ ಡೆಕರೇಟರ್ ಆಗಿದ್ದ ಸಚಿನ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಮಂಗಳೂರು‌ ನಗರ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News