ಬೆಂಕಿ ಅಕಸ್ಮಿಕ, ವೃದ್ಧೆ ಸಾವು

Update: 2022-01-21 16:59 GMT

ಕುಂದಾಪುರ, ಜ.21: ಚಳಿಗೆ ಅಡುಗೆ ಮನೆಯಲ್ಲಿ ಬೆಂಕಿ ಕಾಯಿಸುತ್ತಿರುವಾಗ ಅಕಸ್ಮಿಕವಾಗಿ ಸೀರೆಗೆ ಬೆಂಕಿ ತಗುಲಿ ತೀವ್ರವಾದ ಸುಟ್ಟಗಾಯಗಳಿಂದ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಬಸ್ರೂರಿನ ಹಟ್ಟಿಕುದ್ರು ಎಂಬಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಬುಡ್ಡು ಮೊಗವೀರ್ತಿ (78) ಎಂದು ಗುರುತಿಸಲಾಗಿದೆ.

ಇವರು ಜ.19ರಂದು ಬೆಳಗ್ಗೆ ಚಳಿ ಕಾಯಿಸುತ್ತಿರುವಾಗ ಸೀರೆಗೆ ಬೆಂಕಿ ತಗಲಿತ್ತು. ತೀವ್ರ ಸುಟ್ಟಗಾಯಕ್ಕೊಳಗಾದ ಇವರನ್ನು ಮೊದಲು ಕುಂದಾಪುರ ಬಳಿಕ ಉಡುಪಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರು ವೆನ್‌ಲಾಕ್‌ಗೆ ಸೇರಿಸಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಜ.21ರಂದು ಬೆಳಗ್ಗೆ 8:30ಕ್ಕೆ ಮೃತಪಟ್ಟರು. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News