ಉಡುಪಿ ಜಾಮೀಯ ಮಸೀದಿಯಲ್ಲಿ ಗಣರಾಜ್ಯೋತ್ಸವ
Update: 2022-01-26 07:24 GMT
ಉಡುಪಿ, ಜ.26: ಉಡುಪಿ ಜಾಮಿಯಾ ಮಸೀದಿಯ ವಠಾರದಲ್ಲಿ 73ನೆ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಜಾಮಿಯ ಮಸೀದಿಯ ಖತೀಬ್ ಮೌಲಾನ ರಶೀದ್ ಅಹಮದ್ ನದ್ವಿ ಧ್ವಜಾರೋಹಣಗೈದು ಸಂದೇಶ ನೀಡಿದರು. ಅಧ್ಯಕ್ಷತೆಯನ್ನು ಮಸೀದಿಯ ಅಧ್ಯಕ್ಷ ಮುಹಮ್ಮದ್ ಅರ್ಷದ್ ವಹಿಸಿದ್ದರು.
ಮಸೀದಿಯ ಪ್ರಧಾನ ಕಾರ್ಯದರ್ಶಿ ವಿ.ಎಸ್.ಉಮರ್ ಸ್ವಾಗತಿಸಿದರು. ಸಮಿತಿಯ ಸದಸ್ಯರಾದ ಕರಾಮತ್ ಅಲಿ, ಮುನೀರ್ ಮಹಮದ್, ಖಾಲಿದ್, ತಬ್ರೆಝ್, ಜಮಾಅತ್ ಸದಸ್ಯರು, ಇತರರು ಉಪಸ್ಥಿತರಿದ್ದರು.
ಸಮಿತಿ ಸದಸ್ಯ ಇಫ್ತಿಕಾರ್ ವಂದಿಸಿದರು.