ಬಾಂಬೆ ಐಐಟಿ ಮಾಧ್ಯಮ ಸಮಾವೇಶಕ್ಕೆ ಅರ್ನಬ್‌ ಗೋಸ್ವಾಮಿ ಮತ್ತು ಸುಧೀರ್‌ ಚೌಧರಿ ಮುಖ್ಯ ಅತಿಥಿಗಳು !

Update: 2022-01-30 07:15 GMT

ಮುಂಬೈ: ಭಾರತದ ಪ್ರತಿಷ್ಠಿತ ಐಐಟಿ ಬಾಂಬೆಯಲ್ಲಿನ ಮಾಧ್ಯಮ ಸಮಾವೇಶಕ್ಕೆ ರಿಪಬ್ಲಿಕ್‌ ಟಿವಿ ಪ್ರಧಾನ ಸಂಪಾದಕ ಹಾಗೂ ಆಡಳಿತ ಪಕ್ಷದ ಪರ ಪತ್ರಕರ್ತ ಅರ್ನಬ್‌ ಗೋಸ್ವಾಮಿ ಹಾಗೂ ಝೀ ನ್ಯೂಸ್‌ ಪ್ರಧಾನ ಸಂಪಾದಕ ಸುಧೀರ್‌ ಚೌಧರಿಯನ್ನು ಆಹ್ವಾನಿಸಿರುವುದು ಸದ್ಯ ಆಕ್ರೋಶಕ್ಕೆ ಕಾರಣವಾಗಿದೆ. 

ಫೆಬ್ರವರಿ ೫,೬ರಂದು ಬಾಂಬೆ ಐಐಟಿಯಲ್ಲಿ ನಡೆಯಲಿರುವ ಇ-ಸಮ್ಮಿಟ್‌ ಮೀಡಿಯಾ ಮತ್ತು ಎಂಟರ್ಟೈನ್ಮೆಂಟ್‌ ಸಮಾವೇಶಕ್ಕೆ ಇವರಿಬ್ಬರನ್ನು ಮುಖ್ಯ ಅತಿಥಿಗಳಾಗಿ ಪರಿಗಣಿಸಲಾಗಿದೆ. ಈ ಪೋಸ್ಟರ್‌ ಅನ್ನು ಟ್ವಿಟರ್‌ ನಲ್ಲಿ ಪ್ರಕಟಿಸಿರುವ ಪತ್ರಕರ್ತ ಅಭಿಷೇಕ್‌ ಭಕ್ಷಿ, "ಐಐಟಿ ಬಾಂಬೆ, ನಿಮಗೆ ಇದಕ್ಕಿಂತ ಉತ್ತಮವಾದುದನ್ನು ಮಾಡಬಹುದಿತ್ತು. ಆದರೆ ನನಗೇನೂ ಆಶ್ಚರ್ಯವಾಗಿಲ್ಲ" ಎಂದಿದ್ದಾರೆ.

"ಸುರೇಶ್‌ ಚಾವಂಕೆಗೆ ಸರಿಯಾಗಿ ಇಂಗ್ಲಿಷ್‌ ಬರುತ್ತಿದ್ದರೆ ಆತನನ್ನೂ ಆಹ್ವಾನಿಸುತ್ತಿದ್ದರು" ಎಂದು ಪತ್ರಕರ್ತ ಸಂಶುರ್‌ ರಹ್ಮಾನ್‌ ಹೇಳಿದ್ದಾರೆ. " ಈಗಿರುವ ಸರಕಾರದ ಅಡಿಯಲ್ಲಿಭಾರತದಲ್ಲಿನ ಎಲ್ಲಾ ಪ್ರತಿಷ್ಠಿತ ಯುನಿವರ್ಸಿಟಿಗಳು ಅದಕ್ಕಿರುವ ಮರ್ಯಾದೆಯನ್ನು ಕಳೆದುಕೊಳ್ಳುತ್ತಿದೆ. ಈ ಸರಕಾರಕ್ಕೆ ಎಲ್ಲಾ ಸಂಸ್ಥೆಗಳೂ ಕೇಸರಿಕರಣವಾಗಬೇಕು. ಹನ್ಸ್‌ರಾಜ್‌ ಕಾಲೇಜ್‌ ʼದನಗಳ ನಿರ್ವಹಣೆʼ ಕುರಿತು ಕೋರ್ಸ್‌ ಅನ್ನು ಈಗಾಗಲೇ ಪ್ರಾರಂಭ ಮಾಡಿದೆ. ಐಐಟಿ ಮುಂಬೈ ಏನು ಪ್ರಾರಂಭಿಸಬಹುದು ಎಂದು ತಿಳಿದಿಲ್ಲ". ಎಂದು ವ್ಯಕ್ತಿಯೋರ್ವರು ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News