10 ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆಯಾದ ಹರ್ಯಾಣ ಉಪಮುಖ್ಯಮಂತ್ರಿ ದುಶ್ಯಂತ್ ಚೌಟಾಲ ತಂದೆ

Update: 2022-02-10 16:24 GMT
photo: twitter

ತಿಹಾರ್‌: ಹರ್ಯಾಣದಲ್ಲಿ ಶಿಕ್ಷಕರ ನೇಮಕಾತಿ ಹಗರಣದಲ್ಲಿ 10 ವರ್ಷ ಶಿಕ್ಷೆ ಅನುಭವಿಸಿದ ಮಾಜಿ ಸಂಸದ ಅಜಯ್ ಎಸ್ ಚೌತಾಲಾ ಅವರು ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಅಜಯ್ ಚೌತಾಲಾ ಮತ್ತು ಅವರ ತಂದೆ, ಹರ್ಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲಾ ಸೇರಿದಂತೆ 55 ಮಂದಿಗೆ ಅಕ್ರಮವಾಗಿ 3,000 ಶಿಕ್ಷಕರನ್ನು ಅಕ್ರಮವಾಗಿ ನೇಮಿಸಿಕೊಂಡಿದ್ದಕ್ಕಾಗಿ ಶಿಕ್ಷೆ ವಿಧಿಸಲಾಗಿತ್ತು.‌

ಭಾರತೀಯ ರಾಷ್ಟ್ರೀಯ ಲೋಕದಳ (INLD) ನೇತಾರರಾದ ಅಜಯ್ ಚೌತಾಲಾ ಮತ್ತು ಅವರ ತಂದೆ, ಹರಿಯಾಣದಲ್ಲಿ 1999-2000 ರಲ್ಲಿ ಸರಿಯಾದ ಜೂನಿಯರ್ ಮೂಲಭೂತ ಶಿಕ್ಷಕರನ್ನು ಅಥವಾ JBT ಹುದ್ದೆಗೆ ಸರಿಯಾದ ಕಾರ್ಯವಿಧಾನದ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಬದಲಿಗೆ 3,000 ಕ್ಕೂ ಹೆಚ್ಚು ಇತರೆ ವ್ಯಕ್ತಿಗಳನ್ನು ನೇಮಿಸಿಕೊಳ್ಳಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದಾರೆ.

ತಿಹಾರ್ ಜೈಲಿನ ಹೊರಗೆ ಪುಷ್ಪಗುಚ್ಛಗಳನ್ನು ತಂದ ಬೆಂಬಲಿಗರು ಅಜಯ್ ಚೌತಾಲಾ ಅವರನ್ನು ಸ್ವಾಗತಿಸಿದ್ದು, ಜೈಲಿನಿಂದ ಹೊರಬಂದ ಅವರನ್ನು ಅಪ್ಪಿಕೊಂಡು ಕೈಕುಲುಕಿದ್ದಾರೆ.

ಅವರ ಪುತ್ರ ದುಶ್ಯಂತ್ ಚೌತಾಲ ಅವರು ಹರಿಯಾಣದ ಉಪ ಮುಖ್ಯಮಂತ್ರಿಯಾಗಿದ್ದು  ಜನನಾಯಕ್ ಜನತಾ ಪಾರ್ಟಿ (ಜೆಜೆಪಿ)ಯ ಮುಖ್ಯಸ್ಥರಾಗಿದ್ದಾರೆ, 2018 ರಲ್ಲಿ ಆಂತರಿಕ ಕಲಹದ ಬಳಿಕ INLD ಪಕ್ಷವನ್ನು ದುಶ್ಯಂತ್ ಚೌತಾಲ ತೊರೆದಿದ್ದರು. 

JBT ಹಗರಣಕ್ಕೆ ಸಂಬಂಧಿಸಿ ಸಿಬಿಐ ಜೂನ್ 2008 ರಲ್ಲಿ ಚಾರ್ಜ್‌ಶೀಟ್ ಸಲ್ಲಿಸಿತ್ತು. ದೂರನ್ನು ದಾಖಲಿಸಿದ ಐಎಎಸ್ ಅಧಿಕಾರಿ ಸಂಜೀವ್ ಕುಮಾರ್ ಮತ್ತು ವಿಶೇಷ ಕರ್ತವ್ಯದಲ್ಲಿರುವ ಓಂ ಪ್ರಕಾಶ್ ಚೌಟಾಲಾ ಅವರ ಮಾಜಿ ಅಧಿಕಾರಿ ವಿದ್ಯಾಧರ್ ಅವರನ್ನು ತನ್ನ ಆರೋಪಪಟ್ಟಿಯಲ್ಲಿ ಹೆಸರಿಸಿತ್ತು. ಪ್ರಕರಣದಲ್ಲಿ ಐಎಎಸ್ ಅಧಿಕಾರಿಯೂ ತಪ್ಪಿತಸ್ಥರು ಎಂದು ತೀರ್ಪು ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News