ವಿದ್ಯಾರ್ಥಿನಿಯರು ಪರಸ್ಪರ ಕೈಹಿಡಿದು ನಡೆಯುತ್ತಿರುವ ಉಡುಪಿಯ ಫೋಟೊವನ್ನು ಟ್ವೀಟ್‌ ಮಾಡಿದ ರಾಹುಲ್‌ ಗಾಂಧಿ

Update: 2022-02-17 09:03 GMT
ರಾಹುಲ್‌ ಗಾಂಧಿ ಟ್ವೀಟ್

ಹೊಸದಿಲ್ಲಿ: ಉಡುಪಿಯಲ್ಲಿ ಹಿಜಾಬ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಶಾಲೆಗಳು ಹೈಕೋರ್ಟ್‌ ನ ಆದೇಶವನ್ನು ಅಪಾರ್ಥ ಮಾಡಿಕೊಂಡು ಹಲವು ಹಿಜಾಬ್‌ ಧಾರಿ ವಿದ್ಯಾರ್ಥಿನಿಯರಿಗೆ ಕಾಲೇಜು, ಶಾಲೆಗಳಿಗೆ ಪ್ರವೇಶ ನಿರಾಕರಿಸಲು ಪ್ರಾರಂಭಿಸಿದೆ. ಹಲವೆಡೆ ವಿದ್ಯಾರ್ಥಿನಿಯರು ಅಳುತ್ತಾ ಹಿಂದಿರುಗಿ ಹೋದ ಪ್ರಸಂಸಗಗಳೂ ನಡೆದಿವೆ. ಈ ನಡುವೆ ಹಿಜಾಬ್‌ ಧರಿಸಿರುವ ಬಾಲಕಿಯೊಬ್ಬ ಜೊತೆಗೆ ಇತರ ವಿದ್ಯಾರ್ಥಿಗಳು ಕೈ ಹಿಡಿದು ನಡೆಯುತ್ತಿರುವ ಫೋಟೊವೊಂದು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ.

ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯು ಪ್ರಕಟಿಸಿರುವ ಇರ್ಶಾದ್‌ ಮುಹಮ್ಮದ್ ಕ್ಲಿಕ್ಕಿಸಿರುವ ಈ ಚಿತ್ರವನ್ನು ರಾಹುಲ್‌ ಗಾಂಧಿ ಸೇರಿಂತೆ ಹಲವು ಪ್ರಮುಖರು ಟ್ವೀಟ್‌ ಮಾಡಿದ್ದಾರೆ. ʼವಿವಿಧತೆಯಲ್ಲಿ ಏಕತೆʼ ಎಂಬ ಶೀರ್ಷಿಕೆಯಿರುವ ಈ ಚಿತ್ರವನ್ನು ಹಂಚಿಕೊಂಡ ರಾಹುಲ್‌ ಗಾಂಧಿ "ನಾವು ಒಗ್ಗಟ್ಟಾಗಿರುತ್ತೇವೆ, ಇದು ನನ್ನ ಭಾರತ" ಎಂದು ಟ್ವೀಟ್‌ ಮಾಡಿದ್ದಾರೆ. ಆಲ್ಟ್‌ ನ್ಯೂಸ್‌ ಸಹಸಂಸ್ಥಾಪಕ ಮುಹಮ್ಮದ್‌ ಝುಬೈರ್‌ ಕೂಡಾ ಈ ಕುರಿತು ಟ್ವೀಟ್‌ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News