ಕಾಸರಗೋಡು : ಬಿಜೆಪಿ ಮುಖಂಡ ಟಿ.ಆರ್ .ಕೆ ಭಟ್ ನಿಧನ

Update: 2022-02-18 13:33 GMT

ಕಾಸರಗೋಡು : ಮಂಜೇಶ್ವರ ಬ್ಲಾಕ್ ಪಂಚಾಯತ್ ಮಾಜಿ ಅಧ್ಯಕ್ಷ, ಬಿಜೆಪಿ ಹಿರಿಯ ಮುಖಂಡ ಟಿ.ಆರ್ .ಕೆ ಭಟ್ (94) ಶುಕ್ರವಾರ ಮಧ್ಯಾಹ್ನ ಪೆರ್ಲದ  ಸ್ವಗೃಹದಲ್ಲಿ ನಿಧನರಾದರು.

ಅವರು ಎಣ್ಮಕಜೆ ಗ್ರಾಮ ಪಂಚಾಯತ್ ಮಾಜಿ  ಅಧ್ಯಕ್ಷ ರಾಗಿದ್ದರು. ಹಿರಿಯ ವ್ಯಾಪಾರಿಯಾಗಿದ್ದರು.

ಆರೆಸೆಸ್ಸ್ ಮೂಲಕ ಗಮನ ಸೆಳೆದಿದ್ದ ಭಟ್ ಅವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ  ಜೈಲು ವಾಸ ಅನುಭವಿಸಿ ದ್ದರು. ರಾಜಕೀಯ ಅಲ್ಲದೆ ಧಾರ್ಮಿಕ  ಹಾಗೂ ಸಾಮಾಜಿಕ ವಲಯಗಳಲ್ಲೂ ಗಮನ ಸೆಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News