ಪುಣೆ: ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದ ವೇಳೆ ಉಸಿರುಗಟ್ಟಿ ನಾಲ್ವರ ಸಾವು

Update: 2022-03-02 15:02 GMT

ಪುಣೆ, ಮಾ.2: ಪುಣೆ ನಗರದ ಹೊರವಲಯದಲ್ಲಿರುವ ಲೋಣಿ ಕಾಳಭೋರನಲ್ಲಿ ಬುಧವಾರ ಸೆಪ್ಟಿಕ್ ಟ್ಯಾಂಕ್ ಒಂದನ್ನು ಸ್ವಚ್ಛಗೊಳಿಸುತ್ತಿದ್ದ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಲೋಣಿ ಕಾಳಭೋರನ ಕದಮವಾಕ್ ವಸ್ತಿಯಲ್ಲಿನ ವಸತಿ ಕಟ್ಟಡವೊಂದರಲ್ಲಿ ಪೂರ್ವಾಹ್ನ 11:30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಸೆಪ್ಟಿಕ್ ಟ್ಯಾಂಕ್ನ್ನು ಸ್ವಚ್ಛಗೊಳಿಸಲು ನಾಲ್ವರು ಕಾರ್ಮಿಕರು ಕೆಳಗಿಳಿದಿದ್ದರು. ಉಸಿರುಗಟ್ಟಿದ್ದ ಮೊದಲ ವ್ಯಕ್ತಿಯನ್ನು ಟ್ಯಾಂಕ್ನಿಂದ ಹೊರಕ್ಕೆ ತೆಗೆದಾಗ ಆತ ಪ್ರಜ್ಞಾಹೀನನಾಗಿದ್ದ,ತಕ್ಷಣವೇ ಆತನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದ್ದು,ಆತ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ್ದರು. ಇತರ ಮೂವರನ್ನೂ ತಕ್ಷಣ ಟ್ಯಾಂಕ್ನಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ವೇಳೆಗಾಗಲೇ ಅವರೂ ಮೃತಪಟ್ಟಿದ್ದರು ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News