ರಾಜ್ಯ ಬಜೆಟ್ ಮಂಡನೆಗೆ ಸೆಗಣಿಯಿಂದ ತಯಾರಿಸಿದ ಬ್ರೀಫ್ ಕೇಸ್ ನೊಂದಿಗೆ ಆಗಮಿಸಿದ ಛತ್ತೀಸ್ಗಢ ಸಿಎಂ

Update: 2022-03-09 17:10 GMT

ರಾಯಪುರ, ಮಾ. 9: ಚತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ಅವರು 2022-20ನೇ ವಿತ್ತ ವರ್ಷದ ರಾಜ್ಯ ಬಜೆಟ್ ಮಂಡನೆಗೆ ಸೆಗಣಿ ಹುಡಿಯಿಂದ ತಯಾರಿಸಿದ ಬ್ರೀಫ್ ಕೇಸ್ ನೊಂದಿಗೆ ಬುಧವಾರ ವಿಧಾನ ಸಭೆಗೆ ಆಗಮಿಸಿದರು. ಈ ಬ್ರೀಫ್ ಕೇಸ್ ಅನ್ನು 10 ದಿನಗಳ ಅವಧಿಯಲ್ಲಿ ಸೆಗಣಿ ಹುಡಿ, ಅಂಟು, ಹಿಟ್ಟು ಹಾಗೂ ಇತರ ವಸ್ತುಗಳನ್ನು ಬಳಸಿ ತಯಾರಿಸಲಾಗಿದೆ. 

ಅದರ ಹಿಡಿ ಹಾಗೂ ಕೊಕ್ಕೆಗಳನ್ನು ಕೊಂಡಗಾಂವ್ನ ಕುಶಲಕರ್ಮಿಗಳು ತಯಾರಿಸಿದ್ದಾರೆ. ಈ ಬ್ರೀಫ್ಕೇಶ್ನ ಮೇಲೆ ಸಂಸ್ಕೃತದಲ್ಲಿ ‘‘ಗೋಮಯ ವಾಸತೆ ಲಕ್ಷ್ಮೀ’’ ಎಂದು ಸಂಸ್ಕೃತದಲ್ಲಿ ಕೆತ್ತಲಾಗಿದೆ. ಧನಲಕ್ಷಿ ಗೋಮಯದಲ್ಲಿ ನೆಲೆಸಿದ್ದಾಳೆ ಎಂಬುದು ಇದರ ಅರ್ಥ. ಚತ್ತೀಸ್ಗಢ ವಿಧಾನ ಸಭೆಯ ಬಜೆಟ್ ಅಧಿವೇಶನ ಸೋಮವಾರ ಆರಂಭವಾಗಿದೆ. ಬಜೆಟ್ ಅನ್ನು ಬುಧವಾರ ಮಂಡಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News