ದೋಣಿಯಿಂದ ಹೊಳೆಗೆ ಬಿದ್ದು ಯುವಕ ಮೃತ್ಯು
Update: 2022-03-13 15:54 GMT
ಗಂಗೊಳ್ಳಿ : ಗಂಗೊಳ್ಳಿ ಬಂದರಿನ ಬೋಟ್ ನಿಲ್ಲಿಸುವ ಸ್ಥಳದಲ್ಲಿ ಪಂಚ ಗಂಗಾವಳಿ ಹೊಳೆಯಲ್ಲಿ ಗಾಳ ಹಾಕಿ ಮೀನು ಹಿಡಿಯುತ್ತಿದ್ದ ವ್ಯಕ್ತಿ ಯೊಬ್ಬರು ಅಕಸ್ಮಿಕವಾಗಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಮಾ.12ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ಗಂಗೊಳ್ಳಿ ಬಂದರ್ ದೊಡ್ಡಹಿತ್ಲುವಿನ ಪ್ರದೀಪ್(32) ಎಂದು ಗುರುತಿಸಲಾಗಿದೆ. ಇವರು ದೋಣಿಯಲ್ಲಿ ಗಾಳ ಹಾಕಿ ಮೀನು ಹಿಡಿಯುತ್ತಿರು ವಾಗ ಆಯತಪ್ಪಿ ಹೊಳೆಯ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.