ಉತ್ತರಪ್ರದೇಶ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲು: ಸಂಪೂರ್ಣ ಕಾರ್ಯಕಾರಿ ಮಂಡಳಿ ವಿಸರ್ಜಿಸಿದ ಬಿಎಸ್ಪಿ

Update: 2022-03-27 07:53 GMT

ಲಕ್ನೊ: ಉತ್ತರಪ್ರದೇಶ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷದ(ಬಿಎಸ್ ಪಿ)  ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಬಿಎಸ್ಪಿ  ರಾಜ್ಯಾಧ್ಯಕ್ಷ, ವಿಧಾನಸಭಾ ಸ್ಪೀಕರ್ ಹಾಗೂ  ಜಿಲ್ಲಾಧ್ಯಕ್ಷ ಹುದ್ದೆಗಳನ್ನು ಹೊರತುಪಡಿಸಿ ಪಕ್ಷದ ಕಾರ್ಯಕಾರಿಣಿಯನ್ನು ರವಿವಾರ ವಿಸರ್ಜಿಸಲಾಯಿತು.

ವಿಧಾನಸಭಾ ಚುನಾವಣೆಯ ಸೋಲಿನ ನಂತರ ಮಾರ್ಚ್ 27 ರಂದು ಲಕ್ನೋದಲ್ಲಿ ಪಕ್ಷವು ಪರಿಶೀಲನಾ ಸಭೆಗೆ ಕರೆದಿದೆ.

ಅನೇಕ ಪ್ರಮುಖ ಪುನರ್ರಚನೆಗಳನ್ನು ನಿರೀಕ್ಷಿಸಲಾಗಿದೆ. ಹೊಸ ಮುಖಗಳಿಗೆ ವಿಭಾಗೀಯ ಮಟ್ಟದಲ್ಲಿ ಸ್ಥಾನ ಸಿಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News