×
Ad

ಕೆನಡಾ: 21 ವರ್ಷದ ಭಾರತೀಯ ವಿದ್ಯಾರ್ಥಿಯ ಗುಂಡಿಕ್ಕಿ ಹತ್ಯೆ

Update: 2022-04-09 11:30 IST
Photo:twitter

ಹೊಸದಿಲ್ಲಿ: ಕೆನಡಾದ ಟೊರೊಂಟೊ ನಗರದಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಗ 21 ವರ್ಷದ ಭಾರತೀಯ ವಿದ್ಯಾರ್ಥಿಯು ಗುಂಡೇಟಿನಿಂದ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ಟೊರೊಂಟೊ ಪೊಲೀಸರು ತಿಳಿಸಿದ್ದಾರೆ.

ಮೃತ ವಿದ್ಯಾರ್ಥಿಯನ್ನು  ಕಾರ್ತಿಕ್ ವಾಸುದೇವ್ ಎಂದು ಗುರುತಿಸಲಾಗಿದ್ದು, ಗುರುವಾರ ಸಂಜೆ ಸೇಂಟ್ ಜೇಮ್ಸ್ ಟೌನ್‌ನ ಶೆರ್ಬೋರ್ನ್ ಟಿಟಿಸಿ ನಿಲ್ದಾಣದ ಗ್ಲೆನ್ ರೋಡ್ ಪ್ರವೇಶದ್ವಾರದಲ್ಲಿ ಕಾರ್ತಿಕ್ ಮೇಲೆ ಗುಂಡು ಹಾರಿಸಲಾಗಿದೆ.

ಕಾರ್ತಿಕ್ ವಾಸುದೇವ್ ಅವರು ಆಫ್ ಡ್ಯೂಟಿ ಪ್ಯಾರಾಮೆಡಿಕ್‌ನಿಂದ ವೈದ್ಯಕೀಯ ಆರೈಕೆಯನ್ನು ಪಡೆದರು ಹಾಗೂ  ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟರು ಎಂದು ಟೊರೊಂಟೊ ಪೊಲೀಸ್ ಸೇವೆ ಹೇಳಿಕೆಯಲ್ಲಿ ತಿಳಿಸಿದೆ.

ಸೆನೆಕಾ ಕಾಲೇಜ್ ನಲ್ಲಿ  ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್ ಪ್ರೋಗ್ರಾಂಗೆ ದಾಖಲಾಗಿದ್ದ ಕಾರ್ತಿಕ್ ಜನವರಿಯಲ್ಲಿ ಕೆನಡಾಕ್ಕೆ ತೆರಳಿದ್ದರು.

ವಿದೇಶಾಂಗ ಸಚಿವ ಎಸ್.  ಜೈಶಂಕರ್  ವಿದ್ಯಾರ್ಥಿಯ ಹತ್ಯೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

"ಈ ದುರಂತ ಘಟನೆಯಿಂದ ದುಃಖವಾಗಿದೆ. ವಿದ್ಯಾರ್ಥಿಯ ಕುಟುಂಬಕ್ಕೆ ಸಂತಾಪ ಸೂಚಿಸುವೆ" ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News